ಬೆಂಗಳೂರು: ಕೆಂಪೇಗೌಡ ಆಸ್ಪತ್ರೆ , ಕುವೆಂಪು ಕಲಾಕ್ಷೇತ್ರ ಸಭಾಂಗಣದಲ್ಲಿಂದು ರಾಷ್ಟ್ರಮಟ್ಟದ 6ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಧಿವೇಶನ ಮತ್ತು ವೈಜ್ಞಾನಿಕ ವಿಚಾರ ಸಂಕೀರ್ಣ ” ಸಮಾರಂಭವನ್ನು ಉದ್ಘಾಟಿಸಿದರು.
ಕೋವಿಡ್ -19 ತುರ್ತು ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ತಮ್ಮ ಜೀವನವನ್ನು ಲೆಕ್ಕಿಸದೇ ಹಗಲು – ರಾತ್ರಿ ಎನ್ನದೇ ಸ್ವಾಬ್ ತೆಗೆದು ಪರೀಕ್ಷೆ ಮಾಡಿ ಫಲಿತಾಂಶ ನೀಡಿದ ರಾಜ್ಯದ ಎಲ್ಲಾ ಲ್ಯಾಬ್ ಟೆಕ್ನಾಲಾಜಿಸ್ಟ್, ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಮೆಡಿಕಲ್ ಅಸೋಸಿಯೇಷನ್ 2012 ರಲ್ಲಿ ಪ್ರಾರಂಭವಾಗಿದ್ದು , ಲ್ಯಾಬ್ ಟೆಕ್ನಾಲಾಜಿಸ್ಟ್ ದುಡಿಯುತ್ತಿರುವುದಲ್ಲದೆ, ಅಗಾಪೆ ಸಂಸ್ಥೆಯ ವತಿಯಿಂದ ಆಧುನಿಕ ತಂತ್ರಜ್ಞಾನವುಳ್ಳ ಮೆಷೀನಿಂದ ಮೂತ್ರಪಿಂಡ ಪರೀಕ್ಷೆ, ರಕ್ತ ಪರೀಕ್ಷೆ ಇನ್ನೂ ಮುಂತಾದ ಪರಿಕ್ಷಗಳಿಗೆ ಸಹಾಯವಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥ ತಿಳಿಸಿದರು.
ಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಧಿವೇಶನ ಮತ್ತು ವೈಜ್ಞಾನಿಕ ವಿಚಾರ ಸಂಕೀರ್ಣ, ಆರೋಗ್ಯ ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರಿ ಶಿವರಾಜ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಎಚ್ ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಟಿ ಕೋನರೆಡ್ಡಿ, ಕರ್ನಾಟಕ ರಾಜ್ಯ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ವಿ. ವೆಂಕಟಸ್ವಾಮಿ, ಖಜಾಂಚಿ ಕೆ ಸುರೇಶ್, ಶಿವಮೂರ್ತಿ , ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ನಿಗಮದ ಉಪಾಧ್ಯಕ್ಷ ಎಮ್. ಆರ್. ವೆಂಕಟೇಶ್ ಭಾಗವಹಿಸಿದ್ದರು.