ಬೆಂಗಳೂರು: ಮಗಳಿಗೆ ತಕ್ಕ ಗಂಡು ಸಿಕ್ಕಿಲ್ಲ ಎಂದು ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಸಾವಿಗೆ ಶರಣಾದ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.
ಸಾವಿತ್ರಮ್ಮ(61) ಹಾಗೂ ಇವರ ಮಗಳು ಜುಳಾ (37) ಸಾವಿಗೆ ಶರಣಾದ ದುರ್ದೈವಿಗಳು. ಇವರ ಮನೆಯ ಹೊರಗಡೆ ಯಾರು ಕಾಣಿಸಿದ ಹಿನ್ನೆಲೆ ನೆರಹೊರೆಯವರು ನೋಡಿದ್ದಾರೆ. ಈ ವೇಳೆ ಘಟನೆ ತಿಳಿದು ಬಂದಿದೆ. ಇನ್ನೂ 3 ದಿನಗಳ ಹಿಂದೆಯೇ ಸಾವಿಗೆ ಶರಣಾಗಿರಬಹುದು ಎಂದು ತಿಳಿದು ಬಂದಿದೆ.
ಇನ್ನೂ ಮೃತ ತಾಯಿ ಮಗಳು ತಮಗೆ ಸೇರಿದ ಅಂಗಡಿಗಳ ಬಾಡಿಗೆ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು. ಇನ್ನೂ ಸಾವಿತ್ರಮ್ಮನ ಮಗ ತನ್ನ ಸಂಸಾರದೊಂದಿಗೆ ಕೆಂಗೇರಿಯಲ್ಲಿ ವಾಸಿಸುತ್ತಿದ್ದರು.
ಈ ಹಿಂದೆ ಸಾವಿತ್ರಮ್ಮ ಮಗಳಿಗೆ ಮದುವೆಯಾಗಿಲ್ಲ, ಸೂಕ್ತ ವರ ಸಿಕ್ಕಿಲ್ಲ ಎಂದು ನೆರೆಹೊರೆಯವರ ಬಳಿ ವಿಷಾದ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ. ಯಾವುದೇ ಡೆತ್ ನೋಟ್ ಲಭಿಸಿಲ್ಲ.