News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಸಾರ್ವಜನಿಕರ ಮನ ಪರಿವರ್ತನೆ ಮಾಡಿದ ವಿಭಿನ್ನ ಬ್ಯಾನರ್‌

Bnglr (1)
Photo Credit :

ಬೆಂಗಳೂರು: ಬೆಳೆಯುತ್ತಿರು ನಗರಕ್ಕೆ ಬಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ತ್ಯಾಜ್ಯ. ಕ್ಷಣ ಮಾತ್ರದಲ್ಲಿಅದು ಯಾವದೋ ಮಾಯ ಲೋಕದಿಂದ ಬಂದು ರಾಶಿ ಬೀಳುತ್ತದೆ.

ಈ ಕಸವು ತಾನು ಕೆಡುವುದರ ಜೊತೆಗೆ ಅ ಪರಿಸರದ ಸಾರ್ವಜನಿಕರ ಮೂಗು, ಮನಸ್ಸುನ್ನುಕೆಡಿಸುತ್ತದೆ. ಕೆಲವರು ಇಲ್ಲಿ ಕಸ ಹಾಕಬಾರದು, ತಪ್ಪಿತಸ್ಥರಿಗೆ ಕಠಿಣ ಕ್ರಮ ತಗೆದುಗೊಳ್ಳಲಾಗುವುದು, ಇನ್ನು ಕೆಲವು ಬುದ್ದಿವಂತರು ಸಿಸಿಟಿವಿ ಕ್ಯಾಮರಾದ ಬೆದರಿಕೆಯ ಬೋರ್ಡ್ ಹಾಕಿ ಜನರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಬೆಂಗಳೂರಿನ ಬೃಂದಾವನ ನಗರದ ರಾಜೀವ್‌ ಗಾಂಧಿ ಕ್ರೀಡಾಂಗಣ ಬಳಿ ವಿಭಿನ್ನ ರೀತಿಯ ಬ್ಯಾನರ್‌ ಒಂದು ಎಲ್ಲಾರ ಮನಸನ್ನು ತಟುವ್ಟ ಕೆಲಸ ಮಾಡಿದೆ.
‘ಪರಿಸರವನ್ನು ಹಾಳು ಮಾಡಿದವರಿಗೆ ಆ ಭಗವಂತ ಆರೋಗ್ಯವನ್ನು ಕಿತ್ತುಕೊಂಡು ಅನಾರೋಗ್ಯವನ್ನು ಕಲ್ಪಿಸಲಿ’ ಎನ್ನುವ ಬ್ಯಾನರ್‌ಎಲ್ಲರ ಮನಸ್ಸನ್ನು ಜಾಗ್ರತಗೊಳಿಸಿದೆ.

ಓರ್ವ ವ್ಯಕ್ತಿ ಮಾಡಿರುವ ಈ ಕೆಲಸಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಜನ ಇಲ್ಲಿ ಕಸ ಹಾಕುವುದನ್ನೆ ಮರೆತು ಬಿಟ್ಟಿದ್ದಾರೆ ಆ ಮಟ್ಟಿಗೆ ಪರಿಸರ ಸ್ವಚ್ಚವಾಗಿದೆ. ಯಾವುದೇ ಕಾನೂನು ಕ್ರಮದ ಬೆದರಿಕೆ ಜಗ್ಗದ ಜನದೇವರ ಹೆಸರಲ್ಲಿಉತ್ತಮವಾದ ಬದಲಾವಣೆಯನ್ನು ಸೃಷ್ಟಿಸಿದ್ದಾರೆ. ಈ ಒಂದು ಪ್ರಯತ್ನಎಲ್ಲಾರ ಮೆಚ್ಚುಗೆಗಳಿಸಿ, ಸಾಮಾಜಿಕ ಜಾಲತಾಣಗಲ್ಲಿ ಸಖತ್ ಆಗಿ ವೈರಲ್‌ ಆಗುತ್ತಿದೆ.

Photo credit: Ravikantha kundapura (Facebook)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು