ಬೆಂಗಳೂರು : ಬಿಬಿಎಂಪಿಯ ಎಚ್ಎಂಟಿ ನಗರದ ಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರನಿಗೆ ಶಾಸಕ ಮುನಿರತ್ನ ಆಟೋರಿಕ್ಷಾ ಕೊಡಿಸುವ ಮೂಲಕ ಆತನ ಸ್ವಾವಲಂಬಿ ದುಡಿಮೆಗೆ ಸಹಕಾರ ನೀಡಿದರು. ಈ ವೇಳೆ ಮಾತನಾಡಿದ ಅವರು ಶ್ರಮಪಟ್ಟು ಜೀವನ ನಡೆಸುವವರಿಗೆ ನಾವು ಜೀವನಾಧಾರವಾಗಬೇಕು, ಸ್ವಂತ ದುಡಿಮೆಯಲ್ಲಿ ಬದುಕುವಂತಹ ದಿಟ್ಟತನ ಎಲ್ಲರಲ್ಲೂ ಮೂಡಬೇಕು.
ಸ್ವಾಭಿಮಾನತೆಯಿಂದ ಹಾಗೂ ಮಾನವೀಯತೆಯಿಂದ ಜೀವನ ನಡೆಸುವ ವ್ಯಕ್ತಿ ಹಾಗೂ ವ್ಯಕ್ತಿತ್ವ ಯಾವತ್ತು ಯಾರಿಗೂ ತಲೆಬಾಗು ವುದಿಲ್ಲ ಎಂದರು.
ಇಂತಹ ಮನೋಭಾವನೆಯುಳ್ಳ ವ್ಯಕ್ತಿಗಳನ್ನು ಗೌರವಿಸುತ್ತೇನೆ ಮತ್ತು ಸಹಕರಿಸುತ್ತೇನೆಂದರು. ಈ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ನಿಮ್ಮ ಸಹಕಾರ ಮನೋಭಿಲಾಶೆಗೆ ಕೃತಜ್ಞತೆ ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಬಿಜೆಪಿ ಅಧ್ಯಕ್ಷರಾದ ನಾಗೇಶ್ ಉಪಸ್ಥಿತಿಯಲ್ಲಿದ್ದರು .