ಬೆಂಗಳೂರು : ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ದುರಂತವೊಂದು ನಡೆದಿದ್ದು, ಸಂಪ್ ಸ್ಪಚ್ಛಗೊಳಿಸಲು ಇಳಿದಿದ್ದ ತಂದೆ ಮತ್ತು ಮಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ನಡೆದಿದ್ದು, ಸಂಪ್ ಸ್ವಚ್ಛಗೊಳಿಸುವುದಕ್ಕಾಗಿ ರಾಜು (36) ಒಳಗಿಳಿದ್ದಾರೆ.
ಸ್ವಲ್ಪ ಸಮಯದ ನಂತ್ರ ವಿದ್ಯುತ್ ಪ್ರವಹಿಸಿದ ಪರಿಣಾಮ ಕಿರುಚಾಡಲು ಶುರು ಮಾಡಿದ್ದಾರೆ. ಕಿರುಚಾಟ ಕೇಳಿಸಿಕೊಂಡ ಮಗ ಸಾಯಿ (11) ತಂದೆಯನ್ನ ರಕ್ಷಿಸಲು ಸಂಪ್ಗೆ ಇಳಿದಿದ್ದಾನೆ. ವಿದ್ಯುತ್ ಪ್ರವಹಿಸಿ ಆತನೂ ಸಾವನ್ನಪ್ಪಿದ್ದಾನೆ.ಇನ್ನು ತಂದೆ, ಮಗನ ಶವವನ್ನ ಡಾ. ಅಂಬೇಡ್ಕರ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.