ಬೆಂಗಳೂರು: ಜನರ ಸಹಕಾರದಿಂದ ನಿನ್ನೆಯ ಹೊಸವರ್ಷಾಚರಣೆ ಯಶಸ್ವಿಯಾಗಿದೆ ಎಂದು ಬೆಂಗಳೂರು ಜನತೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಧನ್ಯವಾದ ಅರ್ಪಿಸಿದ್ದಾರೆ.
ನಿನ್ನೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಜನರು ಅವರ ಮನೆಗಳಲ್ಲಿ ಹೊಸ ವರ್ಷಾಚರಣೆ ಮಾಡಿದ್ದಾರೆ
ಎಲ್ಲರಿಗೂ ಧನ್ಯವಾದಗಳನ್ನ ಹೇಳಲು ಬಯಸುತ್ತೇನೆ.2022ಕ್ಕೆ ಕಾಲಿಟ್ಟಿದ್ದೇವೆ, ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಡ್ರಗ್ಸ್ ಪ್ರಕರಣಗಳು ಏರಿಕೆಯಾದ ವಿಚಾರವಾಗಿ ಮಾತನಾಡಿದ ಇವರು ಡ್ರಗ್ಸ್ ದಂಧೆ ನಿನ್ನೆಗೆ ಕೊನೆಯಾಗಿಲ್ಲ.ನಾವೂ ಸಡಿಲಗೊಳಿಸಿದ್ರೆ ಅವ್ರು ಎಚ್ಚೆತ್ತುಕೊಳ್ತಾರೆ ಹೀಗಾಗಿ ಸಣ್ಣ ಸಣ್ಣ ಕ್ವಾಂಟಿಟಿ ಆದ್ರೂ ಸರಿ ಅದರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಆಗ್ತಿದೆ.ಹೀಗಾಗಿ ಡ್ರಗ್ಸ್ ವಿರುದ್ಧದ ಸಮರ ಮುಂದೆಯೂ ಇರಲಿದೆ.ಪೊಲೀಸರು ಇನ್ನಷ್ಟ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಹೇಳಿದರು.