ಬೆಂಗಳೂರು: ಕೋವಿಡ್ ಹಿನ್ನೆಲೆ ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮದ ಆಚರಣೆಗೆ ಬ್ರೇಕ್ ಬಿದ್ದಿದೆ. ಹಲವು ದೇಗುಲಗಳಲ್ಲಿ ಇಂದು 2 ಡೋಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ತಿಮ್ಮಪ್ಪನ ದೇಗುಲಗಳಲ್ಲಿ ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬಹುತೇಕ ವೆಂಕಟೇಶ್ವರ ದೇಗುಲಗಲ್ಲಿ ಇವತ್ತು ವೈಕುಂಠ ದ್ವಾರ ಸ್ಥಾಪನೆ ಮಾಡಲಾಗುತ್ತದೆ.ವೈಕುಂಠ ದ್ವಾರದಲ್ಲಿ ದೇವರ ದರ್ಶನ ಪಡೆದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಜನ ಹೆಚ್ಚಾಗಿ ದೇವಾಲಯಕ್ಕೆ ಹೋಗುತ್ತಾರೆ ಆದ್ರೆ ಈ ಬಾರಿ ಹೆಚ್ಚು ಜನ ಪ್ರವೇಶವನ್ನು ನಿಷೇಧಿಸಲಾಗಿದೆ.