News Karnataka Kannada
Friday, May 03 2024
ಬೆಂಗಳೂರು ನಗರ

ಬೆಂಗಳೂರು:ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಆಟೋ ಚಾಲಕನ ಹತ್ಯೆ

Crime.
Photo Credit :

ಬೆಂಗಳೂರು:  ಮುಂಜಾನೆ ಇಬ್ಬರು ವ್ಯಕ್ತಿಗಳು 32 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಂದಿರುವ ಘಟನೆ ಪೂರ್ವ ಬೆಂಗಳೂರಿನ ಕೋಡಿಹಳ್ಳಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.

ದೊಮ್ಮಲೂರಿನ ದೂಪನಹಳ್ಳಿ ನಿವಾಸಿ ಮಂಜುನಾಥ್ ಆಟೋರಿಕ್ಷಾ ಚಾಲಕರಾಗಿದ್ದರು. ಸೋಮವಾರ ರಾತ್ರಿ ದೂಪನಹಳ್ಳಿಯ ಬಾರ್‌ಗೆ ಹೋಗಿದ್ದ ಅವರು ಮಧ್ಯರಾತ್ರಿಯವರೆಗೆ ಬಾರ್ ಮುಚ್ಚುವವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಂತರ ಮದ್ಯದ ಅಮಲಿನಲ್ಲಿ ಆಟೋದಲ್ಲಿ ಕುಳಿತು ಅಸಭ್ಯವಾಗಿ ಮಾತನಾಡಿದ್ದಾರೆ. ಮುಂಜಾನೆ 1.30 ರ ಸುಮಾರಿಗೆ, ಅವರು ಸಹ ಆಟೋ ಚಾಲಕರಾದ 29 ವರ್ಷದ ಮಧುಸೂಧನ್ ಮತ್ತು 25 ವರ್ಷದ ಯತೀಶ್ ಗೌಡ ಅವರನ್ನು ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ಇಬ್ಬರೂ ದೊಣ್ಣೆ, ಕಬ್ಬಿಣದ ರಾಡ್‌ನಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ, ಮುಖ, ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಜುನಾಥ್ ಮೃತ ವ್ಯಕ್ತಿ. ಘಟನಾ ಸ್ಥಳಕ್ಕೆ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಇದು ಅಪಘಾತದಿಂದ ಆಗಿರುವ ಗಾಯಗಳಲ್ಲ. ಇದು ಕೊಲೆ ಎಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು