ಬೆಂಗಳೂರು: ಮುಂಜಾನೆ ಇಬ್ಬರು ವ್ಯಕ್ತಿಗಳು 32 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಂದಿರುವ ಘಟನೆ ಪೂರ್ವ ಬೆಂಗಳೂರಿನ ಕೋಡಿಹಳ್ಳಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ದೊಮ್ಮಲೂರಿನ ದೂಪನಹಳ್ಳಿ ನಿವಾಸಿ ಮಂಜುನಾಥ್ ಆಟೋರಿಕ್ಷಾ ಚಾಲಕರಾಗಿದ್ದರು. ಸೋಮವಾರ ರಾತ್ರಿ ದೂಪನಹಳ್ಳಿಯ ಬಾರ್ಗೆ ಹೋಗಿದ್ದ ಅವರು ಮಧ್ಯರಾತ್ರಿಯವರೆಗೆ ಬಾರ್ ಮುಚ್ಚುವವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನಂತರ ಮದ್ಯದ ಅಮಲಿನಲ್ಲಿ ಆಟೋದಲ್ಲಿ ಕುಳಿತು ಅಸಭ್ಯವಾಗಿ ಮಾತನಾಡಿದ್ದಾರೆ. ಮುಂಜಾನೆ 1.30 ರ ಸುಮಾರಿಗೆ, ಅವರು ಸಹ ಆಟೋ ಚಾಲಕರಾದ 29 ವರ್ಷದ ಮಧುಸೂಧನ್ ಮತ್ತು 25 ವರ್ಷದ ಯತೀಶ್ ಗೌಡ ಅವರನ್ನು ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ಇಬ್ಬರೂ ದೊಣ್ಣೆ, ಕಬ್ಬಿಣದ ರಾಡ್ನಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ, ಮುಖ, ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಜುನಾಥ್ ಮೃತ ವ್ಯಕ್ತಿ. ಘಟನಾ ಸ್ಥಳಕ್ಕೆ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಇದು ಅಪಘಾತದಿಂದ ಆಗಿರುವ ಗಾಯಗಳಲ್ಲ. ಇದು ಕೊಲೆ ಎಂದು ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.