ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್ ಮಸ್ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣದೊಂದಿಗೆ ಆಚರಣೆ ಮಾಡೋದಕ್ಕೆ ಅವಕಾಶ ನೀಡಲಾಗುತ್ತಿದೆ. ಬಹಿರಂಗವಾಗಿ ಹೊಸ ವರ್ಷ ಆಚರಣೆಗೆ ಅವಕಾಶ ಇಲ್ಲ. ರಾಜ್ಯಾದ್ಯಂತ ಬಾರ್, ಪಬ್ ಗಳಲ್ಲಿ ಡಿಜೆಗೆ ಅವಕಾಶವಿಲ್ಲ.
ಶೇ.50ರ ಮಿತಿಯನ್ನು ಜಾರಿಗೊಳಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2ರವರೆಗೆ ಈ ಹೊಸ ರೂಲ್ಸ್ ಜಾರಿಯ್ಲಲಿ ಇರಲಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತಂತೆ ಕೋವಿಡ್ ತಾಂತ್ರಿಕ ಸಭೆಯ ಬಳಿಕ ಮಾತನಾಡಿದಂತ ಅವರು, ಹೊಸ ವರ್ಷಾಚರಣೆಗೆ ಒಂದು ಸಭೆ ನಡೆಸಲಾಯಿತು. ಈಗಿನ ಪರಿಸ್ಥಿತಿ ಅನುಸರಿಸಿ ತಜ್ಞರ ಶಿಫಾರಸ್ಸಿನಂತೆ ಗುಂಪು ಸೇರೋದ್ಕಕೆ ನಿಷೇಧಿಸಲಾಗಿದೆ. ಬಹಿರಂಗವಾಗಿ ಜನರು ಸೇರೋದಕ್ಕೆ ನಿರ್ಬಂಧಿಸಲಾಗಿದೆ. ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಡಿಜೆಗೆ ಅವಕಾಶವಿಲ್ಲ. ಶೇ.50ರಷ್ಟು ಜನರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಅಪಾರ್ಮೆಂಟ್ ನಲ್ಲಿ ಕೂಡ ಡಿಜೆಗೆ ಅವಕಾಶ ಇಲ್ಲ ಎಂದರು.
ಡಿಸೆಂಬರ್ 30ರಿಂದ ಜನವರಿ 2ರವರೆಗೆ ರಾಜ್ಯದಲ್ಲಿ ಹೊಸ ವರ್ಷಾಚರಣೆಯ ಈ ಹೊಸ ರೂಲ್ಸ್ ಜಾರಿಯಲ್ಲಿ ಇರಲಿದೆ. ಕ್ರಿಸ್ ಮಸ್ ಸಂದರ್ಭದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಬೇಕು. ಆ ಮೂಲಕ ಕ್ರಿಸ್ ಮಸ್ ಆಚರಿಸುವಂತೆ ಸಿಎಂ ಮನವಿ ಮಾಡಿದರು.
ಕ್ಲಬ್ ಗಳಿಗೆ, ಬಾರ್, ಪಬ್ ಗಳಿಗೆ ಹಾಜರಾಗುವಂತವರು ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು. ಡಿಜೆ, ಬಹಿರಂಗ ಆಚರಣೆಗೆ ಅವಕಾಶವಿಲ್ಲ. ಈ ಸಂಬಂಧ ಶೀಘ್ರವೇ ನೂತನ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.