News Karnataka Kannada
Monday, May 06 2024
ಬೆಂಗಳೂರು ನಗರ

‘ಬಯೋಮೆಟ್ರಿಕ್’ ವರ್ಕ್ ಆಗದೇ ಇದ್ರೂ, ಪಡಿತರ ವಿತರಣೆಗೆ ಅವಕಾಶ; ಕೋಟಾ ಶ್ರೀನಿವಾಸ ಪೂಜಾರಿ

No one should be happy that opposition leader has not been elected: Kota Srinivas Poojary
Photo Credit :

ಬೆಂಗಳೂರು : ರಾಜ್ಯದ ಅನೇಕ ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್  ವರ್ಕ್ ಆಗದ ಕಾರಣ, ಪಡಿತರ ವಿತರಣೆ ಆಗದೇ ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಹೀಗಾಗಿ ಇನ್ಮುಂದೆ ಬಯೋಮೆಟ್ರಿಕ್ ವರ್ಕ್ ಆಗದೇ ಇದ್ದರೂ ಪಡಿತರ ವಿತರಣೆ ಮಾಡಲಾಗುತ್ತದೆ ಎಂಬುದಾಗಿ ಸರ್ಕಾರ ತಿಳಿಸಿದೆ.

ವಿಧಾನಪರಿಷತ್ತಿನಲ್ಲಿ ಸೋಮವಾರ ಸದಸ್ಯ ಎಸ್ ರವಿ ಪ್ರಶ್ನೆಗೆ ಉತ್ತರಿಸಿದಂತ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ವಯೋವೃದ್ಧರೂ ಸೇರಿದಂತೆ ಕೆಲವು ಕಾರ್ಮಿಕರ ಬೆರಳು ಸವೆದು ಬಯೋಮೆಟ್ರಿಕ್ ಪಡೆಯಲು ಆಗುತ್ತಿಲ್ಲ. ಹೀಗೆ ತೊಂದರೆಯಾಗುವಂತವರಿಗೆ ಬಯೋಮೆಟ್ರಿಕ್ ಹೊರತುಪಡಿಸಿ, ಪಡಿತರ ವಿತರಣೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಬಯೋಮೆಟ್ರಿಕ್ ಹೊರತುಪಡಿಸಿ ಶೇ.2ರಷ್ಟು ಫಲಾನುಭವಿಗಳಿಗೆ ಪಡಿತರ ಹಂಚಿಕೆಗೆ ಅವಕಾಶವಿದೆ. ಅಗತ್ಯಬಿದ್ದರೇ, ಅದನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು