ಪಿಎಸ್ಐ ಹುದ್ದೆಯಲ್ಲಿನ ಅಕ್ರಮ ಪ್ರಕರಣಕ್ಕೆದಲ್ಲಿ ಸಿಐಡಿ ಪೊಲೀಸರು ಜ್ಯೋತಿ ಪಾಟೀಲ್ ಬಂಧಿಸಿದ್ದು, ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಅಭ್ಯರ್ಥಿ, ಕಿಂಗ್ ಪಿನ್ ಜೊತೆ ಡೀಲ್ ಮಾಡಿಸಿದ್ದ ಆರೋಪ ಜ್ಯೋತಿ ಮೇಲಿದ್ದು, ಅಭ್ಯರ್ಥಿ ಶಾಂತಿಬಾಯಿಯನ್ನ ಮೇಳಕುಂದಿಗೆ ಪರಿಚಯಿಸಿದ್ದಳು.
ಅದ್ರಂತೆ, ಶಾಂತಿಬಾಯಿ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾಳೆ. ಸಧ್ಯ ಆರೋಪಿ ಶಾಂತಿಬಾಯಿ ತಲೆಮೆರಸಿಕೊಂಡಿದ್ದಾಳೆ.
ಇನ್ನು ಬಂಧಿತ ಜ್ಯೋತಿ, ಶಹಬಾದ್ ನಗರಸಭೆಯಲ್ಲಿ ಎಸ್ಡಿಎ ಆಗಿದ್ದು, ಬೆಂಗಳೂರಿನ ಆರ್ಡಿಪಿಆರ್ನಲ್ಲಿ ಕೆಸಲ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಶಹಬಾದ್ ನಗರಸಭೆಗೆ ವರ್ಗಾವಣೆಗೊಂಡಿದ್ದು, ವರ್ಗಾವಣೆ ಬಳಿಕ ಕಲಬುರಗಿಲ್ಲಿಯೇ ಜ್ಯೋತಿ ವಾಸವಿದ್ದರು.