ಬೆಂಗಳೂರು: ಪತಿ ಊಟಕ್ಕೆ ಹೋಟಲ್ಗೆ ಕರದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಪತ್ನಿ ಪಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.ಗೊಲ್ಲಹಳ್ಳಿ ಗ್ರಾಮದ ನಿವಾಸಿ 33 ವರ್ಷದ ಸಂಧ್ಯಾ ಹಾಗೂ ಮಗಳು ಕುಸುಮಾ (4) ಮತ್ತು ಮಗ ರೋಹಿತ್ (2) ಸಾವಿಗೀಡಾದ ದುರ್ದೈವಿಗಳು. ಐದು ವರ್ಷಗಳ ಹಿಂದೆ ಸಂಧ್ಯಾ, ಶ್ರೀಕಾಂತ್ ಎಂಬುವವರ ಜೊತೆ ವಿವಾಹವಾಗಿದ್ದರು.
ಈ ಮಧ್ಯೆ ತನ್ನ ಇಬ್ಬರು ಮಕ್ಕಳಿಗೂ ಕೂಡ ಬೆಂಕಿ ತಗುಲಿದ್ದು ಮೂವರೂ ಸಾವಗೀಡಾದ ಘಟನೆ ದೊಡ್ಡಬಳ್ಳಾಪುರ ಪಟ್ಟಣ ಸಮೀಪದ ಎಸ್ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ತನ್ನನ್ನು ಊಟಕ್ಕೆ ಹೋಟೆಲ್ಗಳಿಗೆ ಕರೆದೊಯ್ಯುವಂತೆ ಸಂಧ್ಯಾ ಆಗಾಗ್ಗೆ ಗಂಡನನ್ನು ಕೇಳುತ್ತಿದ್ದಳು. ಆದರೆ ಅವನು ಪತ್ನಿಯ ಆಸೆಗಳನ್ನು ಪೂರೈಸಲು ವಿಫಲವಾಗುತ್ತಿದ್ದ. ಇದರಿಂದ ಮನನೊಂದ ಪತ್ನಿ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾಳೆ. ಈ ನಡುವೆ ಬಂದ ಇಬ್ಬರು ಮಕ್ಕಳು ಬೆಂಕಿ ತಗುಲಿದೆ. ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಮೂವರನ್ನೂ ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮಂಗಳವಾರ ಮಗ ರೋಹಿತ್ ಸಾವನ್ನಪ್ಪಿದ್ದು, ನಂತರ ಮರುದಿನ ಮಹಿಳೆ ಮತ್ತು ಅವರ ಮಗಳು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇದೀಗ ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ ಮಹಿಳೆಯ ಪೋಷಕರು ಶ್ರೀಕಾಂತ್ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.