ಬೆಂಗಳೂರು: ಪಕ್ಷೇತರ ಶಾಸಕ ಎಚ್. ನಾಗೇಶ್ ಅವರು ಇಂದು ಬೆಳಗ್ಗೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದು, ಸಮ್ಮಿಶ್ರ ಸರ್ಕಾರವು ಈಗ ಅಲ್ಪಮತಕ್ಕೆ ಕುಸಿದಿದೆ.
ಇದರಿಂದ ರಾಜ್ಯ ಸರ್ಕಾರವು ಪತನದ ಅಂಚಿಗೆ ಬಂದು ನಿಂತಿದೆ. ಈಗಾಗಲೇ ನೀಡಿರುವಂತಹ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಸ್ವೀಕರಿಸಿದರೆ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.
ಸರ್ಕಾರಕ್ಕೆ ನೀಡಿರುವಂತಹ ಬೆಂಬಲ ಹಿಂಪಡೆಯುತ್ತಿದ್ದೇನೆ ಮತ್ತು ತಾವು ಸೂಕ್ತ ಕ್ರಮ ಜರುಗಿಸಬೇಕು ಎಂದು ನಾಗೇಶ್ ರಾಜೀನಾಮೆ ಪತ್ರದಲ್ಲಿ ತಿಳಿಸಿರುವರು.