ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಕುರಿತು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ ತೀರ್ಪೊಂದನ್ನು ನೀಡಿದೆ.
ಕೆಎಟಿ ಹಂಗಾಮಿ ಅಧ್ಯಕ್ಷ ಆರ್ ಬಿ ಬೂದಿಹಾಳ ಅವರು ಈ ಆದೇಶ ಹೊರಡಿಸಿದ್ದು, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢ ಶಾಲೆ ಸಹ ಶಿಕ್ಷಕರಾಗಿ ಬಡ್ತಿ ಪಡೆಯಲು ಸಾಧ್ಯವಿಲ್ಲ . ಅವರು ಪ್ರೌಢಶಾಲಾ ಮಕ್ಕಳಿಗೆ ಶಿಕ್ಷಣ ನೀಡುವಷ್ಟು ಅರ್ಹತೆ ಹೊಂದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ತೀರ್ಪಿನಿಂದಾಗಿ ಸಹ ಶಿಕ್ಷಕರಾಗಿ ಬಡ್ತಿ ಪಡೆದಿದ್ದ 8000 ಶಿಕ್ಷಕರು ಹಿಂಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ . 6 ರಿಂದ ಎಂಟನೆ ತರಗತಿಯ ಶಿಕ್ಷಕರನ್ನು ಮಾತ್ರ ಸಹ ಶಿಕ್ಷಕರಾಗಿ ಪರಿಗಣಿಸಬಹುದು ಎಂದು ಕೆಎಟಿ ತೀರ್ಪಿನ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ 1.50 ಲಕ್ಷ ಪ್ರಾಥಮಿಕ ಶಿಕ್ಷಕರಿದ್ದು , ತೀವ್ರ ಒತ್ತಡ ತಂದ ಬಳಿಕ ಸಹ ಶಿಕ್ಷಕರಾಗಿ ನೇಮಕಗೊಳಿಸುವಲ್ಲಿ ಯಶಸ್ವಿಯಾಗಿದ್ದರು.