News Karnataka Kannada
Saturday, May 18 2024
ಬೆಂಗಳೂರು ನಗರ

ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಗೃಹ ಸಚಿವ ಬೊಮ್ಮಾಯಿ

Photo Credit :

ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಕೊರೊನಾ ಸೋಂಕಿನ ಎರಡನೆಯ ಅಲೆಯಲ್ಲಿ ರಾಜ್ಯ ತತ್ತರಿಸಿದ್ದು, ರಾಜ್ಯ ಸರ್ಕಾರ ತಡವಾಗಿ ಕೆಲ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು.

‘ರಾತ್ರಿ ವೇಳೆ ಕೊರೊನಾ ಅಂತ ಇದೆ. ಕರ್ಫ್ಯೂ ಉಲ್ಲಂಘನೆ ಮಾಡಿದವರ ಗಾಡಿ ಸೀಸ್ ಮಾಡುವುದಕ್ಕೆ ಹೇಳಿದ್ದೇವೆ ಎಂದಿದ್ದಾರೆ. ಕಲ್ಯಾಣ ಮಂಟಪ, ಸಭಾ ಭವನದ ಮಾಲೀಕರ ಜತೆ ಚರ್ಚೆ ನಡೆಸಿದ್ದೇವೆ. ಅವರಿಂದ ನಿಯಮಗಳ ಉಲ್ಲಂಘನೆ ಆಗದಂತೆ ಸೂಚನೆ ನೀಡಲಾಗಿದೆ. ಮದುವೆಗಳಲ್ಲಿ ನಿಯಮ ಉಲ್ಲಂಘನೆ ಆದ್ರೆ ಕಲ್ಯಾಣ ಮಂಟಪವನ್ನು ಬಂದ್ ಮಾಡಿಸುತ್ತೇವೆ’ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

‘ಕರ್ಫ್ಯೂ ವೇಳೆ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುವುದು. ಕಳೆದ ಬಾರಿಯ ಅನುಭವ ನಮಗಿದೆ. ಪೊಲೀಸರು ಏಕಾಏಕಿ ಲಾಟಿಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಲಾಟಿ ಎತ್ತಿಕೊಳ್ಳುವ ಅವಶ್ಯಕತೆ ಇಲ್ಲವೆಂದು ನಾನೂ ತಿಳಿದಿದ್ದೇನೆ. ಆಂಬುಲೆನ್ಸ್ ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಆಸ್ಪತ್ರೆಗಳ ಬಗ್ಗೆ ಲಭ್ಯವಿರುವ ಬೆಡ್ ಗಳ ಬಗ್ಗೆ, ಅವುಗಳ ಹಂಚಿಕೆ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಜೊತೆ ಜಂಟಿಯಾಗಿ ಸಭೆ ನಡೆಸಿ ಅಂತ ಸೂಚಿಸಿದ್ದರು. ಜಂಟಿ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಬಿಬಿಎಂಪಿ ಆಯುಕ್ತರು, ಝೋನಲ್ ಹೆಡ್, ಡಿಸಿಪಿಗಳ ಜೊತೆ ಮಾತನಾಡಿದ್ದೇವೆ’ ಎಂದು ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳು 7 ಸಾವಿರ ಬೆಡ್‌ಗಳನ್ನು ನೀಡಿವೆ. ನಗರದಲ್ಲಿ ಇನ್ನೂ 4 ಸಾವಿರ ಬೆಡ್‌ಗಳನ್ನು ನೀಡಬೇಕಾಗಿದೆ. ಈಗಾಗಲೇ ಹಂಚಿಕೆ ಮಾಡಿದ ಬೆಡ್‌ಗಳ ಬಗ್ಗೆ ಪರಿಶೀಲನೆ ಮಾಡಿ ಬೆಡ್ ಸಮಸ್ಯೆ ಬಗೆಹರಿಸಲಾಗುವುದು. ಬಿಬಿಎಂಪಿಯ 8 ಜಂಟಿ ಆಯುಕ್ತರು, ಡಿಸಿಪಿಗಳ ವ್ಯವಸ್ಥೆ ಮಾಡಲಾಗಿದ್ದು, ಅವರುಗಳು ಆಯಾ ವಲಯದಲ್ಲಿ ಬೆಡ್ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಎಲ್ಲ ಡಿಸಿಪಿಗಳು ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸ್ತಾರೆ. ಇಂದು ಸಂಜೆ ಅಥವಾ ರಾತ್ರಿಯೊಳಗೆ ಬೆಡ್ ಪಡೆಯುತ್ತೇವೆ. ಖಾಸಗಿ ಆಸ್ಪತ್ರೆಗಳು ನೀಡಬೇಕಾದ ಬೆಡ್‌ಗಳನ್ನ ಪಡೆಯುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ.

ಎಂಟು ಝೋನ್ ಗಳಲ್ಲಿ ವಿಭಾಗಿಸಲಾಗಿದೆ. ಜಂಟಿ ಇನಸ್ಪೆಕ್ಷನ್ ಮಾಡ್ತೇವೆ. 7೦೦೦ ಬೆಡ್ ಗಳು ಲಭ್ಯವಾಗಿವೆ, ಇನ್ನು 4೦೦೦ ಬೆಡ್ ಗಳು ಲಭ್ಯವಾಗಬೇಕು. ಇದರ ಸತ್ಯಾಸತ್ಯತೆ ತಿಳಿದುಕೊಂಡು ಬೆಡ್ ಗಳನ್ನು ಹಂಚಿಕೆ ಬಗೆಹರಿಸುತ್ತೇವೆ. ಎಂಟು ಮಂದಿ ಜಾಯಿಂಟ್ ಕಮಿಷನರ್ ಹಾಗೂ ಎಂಟು ಡಿಸಿಪಿಗಳು ಅವರವರ ವಲಯಗಳ ಆಸ್ಪತ್ರೆಗಳ ಬೆಡ್ ವ್ಯವಸ್ಥೆ ನೋಡಿಕೊಳ್ಳುವುದು. ಜನಸಂದಣಿ ಜಾಸ್ತಿ ಆಗಿ ಕೆಲ ಆಸ್ಪತ್ರೆ ಲಾ ಆಂಡ್ ಆರ್ಡರ್ ಮೆಂಟೇನ್ ಮಾಡಬೇಕು. ಜನರಲ್ ಬೆಡ್ ಬದಲಾಗಿ ಆಕ್ಸಿಜನ್ ಬೆಡ್ ಒದಗಿಸಿ ಕೊಡುವುದು ಎಂದು ಸಚಿವ ಬೊಮ್ಮಾಯಿ ಸೂಚಿಸಿದ್ದಾರೆ.

ಈಗ ಎಲ್ಲ ಡಿಸಿಪಿಗಳು ಸಭೆಯನ್ನು ಮಾಡ್ತಾರೆ. ಡಿಸಿಪಿಗಳು IAS ಅಧಿಕಾರಿಗಳ ಸಂಪರ್ಕದಲ್ಲಿರಬೇಕು. 3 ಗಂಟೆಗೆ ಎಲ್ಲ ಆಸ್ಪತ್ರೆ ವಿಸಿಟ್ ಮಾಡ್ತಾರೆ. ಸಂಜೆ ಅಥವಾ ರಾತ್ರಿ ವೇಳೆಗೇ ಆಗಲಿ ಎಷ್ಟೇ ಹೊತ್ತಾಗಲಿ 4೦೦೦ ಬೆಡ್ ಗಳನ್ನು ಪಡೆದುಕೊಳ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು