ಬೆಂಗಳೂರು: ನಾಡ ಬಂದೂಕು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವರು.
ರಾಮನಗರದ ಕನಕಪುರ ನಿವಾಸಿ ಲಿಂಗರಾಜ್ ಬಂಧಿತ ಆರೋಪಿ. ಈತ 11 ನಾಡ ಬಂದೂಕು ಮತ್ತು ಅದರ ಬಿಡಿ ಭಾಗಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿರುವರು.
ಬೈಕ್ ನಲ್ಲಿ ಪ್ಲಾಸ್ಟಿಕ್ ಚೀಲ ಮುಚ್ಚಿಕೊಂಡು ಬಂದೂಕುಗಳನ್ನು ತಂದಿದ್ದ. ಈತನನ್ನು ಕಂಡು ಅನುಮಾನಗೊಂಡ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಆರೋಪಿ ಸಿಕ್ಕಿಬಿದ್ದಿದ್ದಾನೆ.