ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಅನ್ನೋದು ಲೆಕ್ಕಕ್ಕೆ ಉಂಟು, ಆಟಕ್ಕೆ ಇಲ್ಲದಂತೆ ಆಗಿದೆ. ಒಂತರ ಬಂದ ಪುಟ್ಟ, ಹೋದ ಪುಟ್ಟ ತರ. ಇದು ನನಗೆ ಅವಶ್ಯಕತೆನೇ ಇರಲಿಲ್ಲ ಎಂಬುದಾಗಿ ಬಿಜೆಪಿ ಸರ್ಕಾರದ ವಿರುದ್ಧವೇ, ಸ್ವಪಕ್ಷೀಯ ಶಾಸಕ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಈ ಬಗ್ಗೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದಂತ ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಅಂತ ಹುದ್ದೆ ಕೊಟ್ಟು, ಅದಕ್ಕೊಂದು ಚೇಂಬರ್, ವಾಸಕ್ಕೊಂದು ಮನೆ ಕೊಟ್ಟಿದ್ದಾರೆ. ಅದನ್ನು ಬಿಟ್ಟು ಬೇರೇನೂ ಕೊಟ್ಟಿಲ್ಲ. ಇಲ್ಲಿ ಮಾಡೋಕೆ ಏನೂ ಕೆಲಸವೇ ಇಲ್ಲ ಎಂದರು.
ನನಗೆ ನೀಡಿರುವಂತ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕಿಂತ, ನಾನು ಶಾಸಕನಾಗಿಯೇ ಇರುತ್ತೇನೆ ಎಂದು ಅವರು, ಯತ್ನಾಳ್ ರಾಜಕೀಯ ಬದಲಾವಣೆಗೂ ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ಹೊರತುಪಡಿಸಿ ಉಳಿದೆಲ್ಲ ಸಂಪುಟ ಸಚಿವರು ಬದಲಾವಣೆ ನಿಶ್ಚಿತ. ಅದು ಅಭಿವೃದ್ಧಿಯ ದೃಷ್ಠಿಯಿಂದಲೂ ಒಳ್ಳೆಯದು ಎಂದರು.