ಬೆಂಗಳೂರು : ಆಗ್ಗಾಗ್ಗೆ ತಮ್ಮ ಪಕ್ಷದ ವಿರುದ್ಧ ಮಾತನಾಡಿ ತಿದ್ದಿಕೊಳ್ಳುವ ಸಿದ್ದರಾಮಯ್ಯ ಅವರಿಂದ ಇಂದು ಮತ್ತೆ ಅದೇ ಪ್ರಸಂಗ ನಡೆಯಿತು.
ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಹೇಳಿದರು. ಕೂಡಲೇ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮದೇ ಧಾಟಿಯಲ್ಲಿ ಯಾಕ್ರೀ ಗದ್ದಲ ಮಾಡ್ತೀರಾ, ಹೌದು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ತಿದ್ದಿಕೊಂಡಿದ್ದಾರೆ.
ಇನ್ನು ಬೆಲೆ ಏರಿಕೆ ಖಂಡಿಸಿದ ಅವರು ನಮ್ಮ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಈ ರೀತಿ ಏರಿಕೆ ಆಗಿರಲಿಲ್ಲ, ಒಳ್ಳೇ ದಿನ ಬರುತ್ತೇ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆ ದಿನ ಯಾರಿಗೆ ಬಂದಿದೆ ಎಂಬುದನ್ನು ಹೇಳಲಿ ಎಂದರು.