ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ, ಅವರ ಹುಟ್ಟುಹಬ್ಬದ ಇಂದೇ ಬಿಡುಗಡೆ ಕಂಡಿದೆ. ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸುವಂತೆ, ಆಡಳಿತ, ವಿಪಕ್ಷಗಳೆರಡೂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಧಾನ ಸೌಧದಲ್ಲಿ ಗೃಹ ಸಚಿವ ಅರಗ ಜ್ಜಾನೇಂದ್ರ ಮಾತನಾಡಿ, ಹಿಜಾಬ್ ನೆಪದಲ್ಲಿ ಮನಸ್ಸು ಮನಸ್ಸುಗಳನ್ನ ಹೊಡೆಯುವವರ ಮೇಲೆ ನಿಗಾ ವಹಿಸಲಾಗಿದೆ. ಪರೀಕ್ಷೆ ತಿರಸ್ಕರಿಸಿ ಹೋದ ವಿದ್ಯಾರ್ಥಿಗಳಿಗೆ ಏನೂ ಮಾಡಲೂ ಸಾಧ್ಯವಿಲ್ಲ. ಪರೀಕ್ಷೆ ಬರೆಯದೆ ಹೋದ ವಿಧ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡ್ಕೋತಾರೆ ಎಂದು ಹೇಳಿದರು.
ಪುನೀತ್ ರಾಜ್ಕುಮಾರ್ ಇಲ್ಲದೇ ಇರೋದು ನಮ್ಮ ದುರಾದೃಷ್ಟವಾಗಿದೆ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ, ಅವರು ಬಿಟ್ಟು ಹೋದ ಕಾರ್ಯಗಳನ್ನು ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗಲಿ. ಜೇಮ್ಸ್ ಚಿತ್ರದ ತೆರಿಗೆ ವಿನಾಯತಿ ವಿಚಾರ ಮುಖ್ಯ ಮಂತ್ರಿಗಳ ಜೊತೆ ಮಾತನಾಡುವೆ ಎಂಬುದಾಗಿ ತಿಳಿಸಿದರು.