News Karnataka Kannada
Monday, May 13 2024
ಬೆಂಗಳೂರು ನಗರ

ಕ್ಷಣಕ್ಷಣಕ್ಕೂ ತಿರುಗು ಪಡೆದುಕೊಳ್ಳುತ್ತಿರುವ ಸಿಡಿ ಪ್ರಕರಣ; ಕೋಟಿಗೆ ನೇರವಾಗಿ ಹಾಜರಾಗಲು ಒಪ್ಪಿಗೆ

Photo Credit :

ಕ್ಷಣಕ್ಷಣಕ್ಕೂ ತಿರುಗು ಪಡೆದುಕೊಳ್ಳುತ್ತಿರುವ ಸಿಡಿ ಪ್ರಕರಣ; ಕೋಟಿಗೆ ನೇರವಾಗಿ ಹಾಜರಾಗಲು ಒಪ್ಪಿಗೆ

ಬೆಂಗಳೂರು : ತನಗೆ ಭದ್ರತಾ ಸಿಬ್ಬಂದಿಗಳ ಮೇಲೆ ನಂಬಿಕೆ ಇಲ್ಲ ಎಂದು ಹಾಗೂ ನೇರವಾಗಿ ಕೋರ್ಟ್ ಗೆ ಹಜರ್ ಆಗುವುದಕ್ಕೆ ಅನುಮತಿ ಕೋರಿದ್ದ ಸಿಡಿ ಲೇಡಿ ಗೆ ಇದೀಗ ಹೈಕೋರ್ಟ್ ಒಪ್ಪಿಗೆ ನೀಡಿದೆ.

ಕೋರ್ಟ್ ಅನುಮತಿ ನೀಡಿರುವ ಆದೇಶದ ಪ್ರತಿ ಪಡೆಯಲು ವಕೀಲ ಜಗದೀಶ್ ಅವರು ಕೋರ್ಟ್’ಗೆ ತೆರಳಿದ್ದಾರೆ . ಆದೇಶ ಪ್ರತಿ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವ ಸಾಧ್ಯತೆಯಿದೆ . ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಹಿನ್ನೆಲೆ ಆಕೆಯ ಭದ್ರತೆಗೆ ಎಸ್‌ಐಟಿಯಿಂದ ಓರ್ವ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ ಸೇರಿದಂತೆ 8 ಜನರ ತಂಡ ರಚನೆ ಮಾಡಲಿದೆ .

ಯುವತಿ ಹೇಳಿದಲ್ಲಿ ತೆರಳಿ ಭದ್ರತೆ ನೀಡಲು , ಆಕೆಯ ಹೇಳಿಕೆ ದಾಖಲಿಸಲು ವಿಶೇಷ ತಂಡ ಸಿದ್ಧವಾಗಿದೆ . ಒಂದು ವೇಳೆ ಆಕೆಯೇ ನೇರವಾಗಿ ಹಾಜರಾದರೂ ಈ ತಂಡ ಭದ್ರತೆ ನೀಡಲಿದೆ ಎಂದು ಎಸ್’ಐಟಿ ಮೂಲಗಳು ತಿಳಿಸಿವೆ . ಆದರೆ ಯುವತಿ ಸೋಮವಾರವೇ ನ್ಯಾಯಾಲಯಕ್ಕೆ ಹಾಜರಾಗ್ತಾಳಾ ಅಥವಾ ಕೋರ್ಟ್ ಬೇರೆ ಸಮಯ ನೀಡಿದೆಯೇ ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ .

ಈ ಎಲ್ಲದರ ನಡುವೆ ಸಿಡಿ ಲೇಡಿಯ ಪೋಷಕರು ಡಿಕೆಶಿ ವಿರುದ್ಧ ಹೇಳಿಕೆ ನೀಡುತ್ತಾರೆ. ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ, ಕೆಲಸ ಕೊಡಿಸುವುದಾಗಿ ಡಿಕೆಶಿ ಹುಡುಗರು ಹೇಳಿದ್ದರು. ರಾಜಕೀಯ ದಾಳವಾಗಿ ನಮ್ಮ ಮಗಳನ್ನು ಬಳಕೆ ಮಾಡಿದ್ದಾರೆ ಎಂಬುದಾಗಿ ಡಿಕೆಶಿ ಮತ್ತು ತಮ್ಮ ಮಗಳ ವಿರುದ್ಧವೇ ಹೇಳಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು