ಬೆಂಗಳೂರು : ಕೋವಿಡ್ ಸೋಂಕಿಗೆ ಬಲಿಯಾದ ಹಿರಿಯ ಪತ್ರಕರ್ತ ಎಚ್ . ಎಸ್ ಮಹದೇವ ಪ್ರಕಾಶ್.
65 ವಯಸ್ಸಿನ ಮಹದೇವ ಪ್ರಕಾಶ್ 10 ದಿನದ ಹಿಂದೆ ಸೋಂಕು ದೃಢಪಟ್ಟು , ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು .
ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದ ಅವರು ಈ ಭಾನುವಾರ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು .