ಬೆಂಗಳೂರು: ಪೊಲೀಸ್ ಪೇದೆಯೊಬ್ಬ ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಜನರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ ಆತನನ್ನು ಸಂಚಾರಿ ವಿಭಾಗದ ಡಿಸಿಪಿ ಅನುಪಮ್ ಅಗರವಾಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಂಪಾಟ ಮಾಡುತ್ತಿದ್ದ ಪೇದೆಯನ್ನು ಬಾಲಾಜಿ ನಾಯ್ಕ್ ಎಂದು ಗುರತಿಸಲಾಗಿದೆ.
ಬುಧವಾರ ರಾತ್ರಿ ಮೈಕೋಲೇಔಟ್ ಸಂಚಾರಿ ಠಾಣೆಯ ಪೇದೆ ಬಾಲಾಜಿ ನಾಯ್ಕ್ ಹೆಬ್ಬಾಳ ಪೊಲೀಸ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾನೆ.
ಮೊದಲು ದೂರು ನೀಡಿದರೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಡಿಸಿಪಿ ಅನುಪಮ ಅಗರ್ವಾಲ್ ಅವರು ಕರ್ತವ್ಯನಿರತ ಪೇದೆಯ ದಾಂಧಲೆ ಸ್ಪಷ್ಟವಾದ ಹಿನ್ನೆಲೆ ಆತನನ್ನು ಅಮಾನತು ಮಾಡಿದ್ದಾರೆ.