ಬೆಂಗಳೂರು: ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಕಿರುತೆರೆ ನಟಿ ಶೃತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಇಂದು ನೆಲಮಂಗಲ ತಾಲೂಕಿನ ಕೋಚೆಹಳ್ಳಿಯ ತನ್ನ ಗೆಳೆಯನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಶ್ರುತಿ ಗೆಳೆಯ ಶ್ರೀಕಾಂತ್ ಜೊತೆ ಜಗಳವಾಡಿಕೊಂಡಿದ್ರು ಅನ್ನೋ ವಿಚಾರ ತಿಳಿದುಬಂದಿದ್ದು, ಆಕೆಯ ಸಾವು ಆತ್ಮಹತ್ಯೆಯಲ್ಲ ಇದೊಂದು ಕೊಲೆ ಎಂದು ಶ್ರುತಿಯವರ ಪತಿ ಉಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರುತಿ ಗೆಳೆಯ ಶ್ರೀಕಾಂತ್ನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.