ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಮಹಾವಿದ್ಯಾಲಯ, ಕಾಲೇಜು, ಸಂಸ್ಥಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ವೈದ್ಯರಿಗೆ, ಈಗ ರಾಜ್ಯ ಸರ್ಕಾರ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಕಳ್ಳಾಟದ ಕರ್ತವ್ಯ ನಿರ್ವಹಣೆಯ ವೈದ್ಯರಿಗೆ ಶಾಕ್ ನೀಡಿದೆ.
ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯ, ಕಾಲೇಜುಗಳು, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೈದ್ಯರುಗಳು ಬಯೋಮೆಟ್ರಿಕ್ ಹಾಜರಾತಿಯನ್ನು ಪಾಳಿಯ ಅನುಸಾರ ಮಾಡುವಂತೆ ಆದೇಶಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗುವಂತ ವೈದ್ಯರು ಕಾಲೇಜು ಪ್ರಾರಂಭದ ಸಮಯದಲ್ಲಿ, ಎರಡನೇ ಪಾಳಿ ಕೆಲಸಕ್ಕೆ ಬಂದ್ರೇ ಮಧ್ಯಾಹ್ನ 2 ಗಂಟೆಗೆ, ಆನಂತ್ರ ದಿನದ ಪಾಳಿಯ ಅಂತ್ಯದ ಸಮಯದ್ಲಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ನಮೂದಿಸುವಂತೆ ಖಡಕ್ ಸೂಚನೆ ನೀಡಿದೆ.