ಬೆಂಗಳೂರು : ಐಷಾ ರಾಮಿ ಕಾರುಗಳ ಜೀವಿತಾವಧಿ ತೆರಿಗೆ ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2015ರ ಏ.1ರಿಂದ 2021ರ ನ.30ರ ಅವಧಿಯಲ್ಲಿ ನೋಂದಾಯಿಸಲಾದ 20 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳ ಪೈಕಿ 124 ವಾಹನಗಳು ಜೀವಿತಾವಧಿ ತೆರಿಗೆ ಕಟ್ಟಿಲ್ಲ ಎಂಬ ವಿಚಾರ ಪತ್ತೆಯಾಗಿದೆ.
ಈ ಪೈಕಿ 13 ವಾಹನಗಳನ್ನು ಜಪ್ತಿ ಮಾಡಿ 1.64 ಲಕ್ಷ ರೂ. ತೆರಿಗೆ ವಸೂಲು ಮಾಡಲಾಗಿದೆ. ತೆರಿಗೆ ಪಾವತಿಸದೆ ನೋಂದಣಿಯಾದ ವಾಹನಗಳ ಕಡತಗಳು ನಾಪತ್ತೆ ಯಾಗಿರುವುದಾಗಿ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸಿಐಡಿಗೆ ವಹಿಸಲಾಗುವುದು ಎಂದರು.