ಬೆಂಗಳೂರು : ಕೋವಿಡ್ ನಂತ್ರ ಜನತೆ ಆರ್ಥಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿಯೇ ಕೆ ಎಸ್ ಆರ್ ಟಿ ಸಿ ಬಸ್ ದರ ಹೆಚ್ಚಳ ಮಾಡಲಾಗುತ್ತಿದೆ ಎನ್ನಲಾಗುತ್ತಿತ್ತು. ಆದ್ರೇ ಸದ್ಯಕ್ಕೆ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ ಎಂಬುದಾಗಿ ಸಚಿವರು ತಿಳಿಸೋ ಮೂಲಕ, ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೊರೋನಾ, ತೈಲದರಗಳ ಬೆಲೆ ಏರಿಕೆಯಿಂದಾಗಿ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾವೆ. ನೌಕರರಿಗೆ ಸಂಬಳ ಕೂಡ ನೀಡಲಾಗದಷ್ಟು ಸಮಸ್ಯೆ ಎದುರಿಸುವಂತೆ ಆಗಿದೆ. ಇದರ ನಡುವೆಯೂ ವೋಲ್ವೋ ಪ್ರಯಾಣದರ ಇಳಿಕೆ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಪ್ರಯಾಣದರ ಏರಿಕೆ ಮಾಡೋದಿಲ್ಲ ಅಂತ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿಯೇ ಮುಷ್ಕರ ನಡೆಸಿದಂತ ನೌಕರರ ವಜಾ ಕುರಿತಂತೆ ಮಾತನಾಡಿದಂತ ಅವರು, ವಜಾಗೊಂಡ ನೌಕರರನ್ನು ಮರಳಿ ನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದೂ ಅವರ ಕುಟುಂಬದ ಮುಖವನ್ನು ನೋಡಿ ಮರುನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರನ್ನು ಮರುನೇಮಕ ಮಾಡಿಕೊಂಡಿದ್ದು, ನಾಳೆ 200 ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮುಷ್ಕರದಿಂದಾಗಿ 1,610 ನೌಕರರು ಭಾಗಿಯಾಗಿ ತೊಂದರೆ ಪಡುವಂತಾಗಿದೆ. ಮುಷ್ಕರ ನೇತೃತ್ವ ವಹಿಸಿಕೊಂಡವರು ಓಡಿ ಹೋಗಿದ್ದಾರೆ. ಆದ್ರೇ ಸರ್ಕಾರ ನಿಮ್ಮ ಜೊತೆಗಿದೆ. ಮುಂದೆ ಮತ್ತೆ ಮುಷ್ಕರ ನಡೆಸಿದ್ರೇ ನಾವು ನಿಮ್ಮ ಜೊತೆಗೆ ಇರೋದಿಲ್ಲ. ಸರ್ಕಾರದೊಂದಿಗೆ ಚರ್ಚಿಸಿ ಬಗೆ ಹರಿಸಿಕೊಳ್ಳಿ ಎಂಬುದಾಗಿ ಸಲಹೆ ಮಾಡಿದರು.