ಬೆಂಗಳೂರು: ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಕೇಂದ್ರೀಯ ತನಿಖಾ ತಂಡ(ಸಿಬಿಐ)ವು ಬೆಂಗಳೂರು ಗ್ರಾಮಾಂತರದ ಶಂಕಿತ ಜಿಲ್ಲಾಧಿಕಾರಿ ಬಿಎಂ ವಿಜಯಶಂಕರ್, ಸಹಾಯಕ ಕಮಿಷನರ್ ಎಲ್ ಸಿ ನಾಗರಾಜ್ ಮತ್ತು ಗ್ರಾಮ ಕರಣಿಕ ಮಂಜುನಾಥ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಐಎಂಎ ನಿರ್ದೇಶಕರಿಂದ ಹಣ ಸಂಗ್ರಹಿಸಿ ಅದನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಂಜುನಾಥ್ ಮಾಡುತ್ತಿದ್ದರು. ವಿಜಯಶಂಕರ್ ಮತ್ತು ನಾಗರಾಜ್ ಯಾವುದೇ ದಾಖಲೆಗಳು ಹಾಗೂ ಅನುಮತಿ ಪಡೆಯದೆ ಐಎಂಎ ಕಾರ್ಯನಿರ್ವಹಿಸಲು ಲಂಚ ಸ್ವೀಕರಿಸಿದ್ದರು ಎನ್ನುವ ಆರೋಪವಿದೆ.
ಐಎಂಎ ಪ್ರಕರಣದಲ್ಲಿ ಸಿಬಿಐ ದಾಖಲಿಸಿಕೊಂಡಿರುವ ಮೂರನೇ ಎಫ್ ಐಆರ್ ಇದಾಗಿದೆ.