News Karnataka Kannada
Sunday, April 28 2024
ಬೆಂಗಳೂರು ನಗರ

ಎಡಿಜಿಪಿ ರವೀಂದ್ರನಾಥ ರಾಜೀನಾಮೆ ಅಂಗೀಕರಿಸದಂತೆ ಒತ್ತಾಯ

Bheem Sen
Photo Credit : News Kannada

ಬೆಂಗಳೂರು: ಇತ್ತೀಚಿಗೆ ರಾಜೀನಾಮೆ ನೀಡಿರುವ ಎಡಿಜಿಪಿ ರವೀಂದ್ರನಾಥ ಅವರಿಗೆ ಕರ್ನಾಟಕ ಸರ್ಕಾರ ಬಹಳ ದೌರ್ಜನ್ಯ ಮಾಡುತ್ತಿದೆ ರಾಜೀನಾಮೆ ಯಾವುದೇ ಕಾರಣಕ್ಕೂ ಸರ್ಕಾರ ಅಂಗೀಕರಿಸದೆ ಪುನಃ ಅದೇ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಸಮತಾ ಸೈನಿಕದಳ ರಾಜ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಒತ್ತಾಯಿಸಿದ್ದಾರೆ.

ನಗರದ ಜೈ ಭೀಮ್ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 131 ನೇ ಜಯಂತೋತ್ಸವ ಮತ್ತು ಕರ್ನಾಟಕ ಭೀಮ್ ಸೇನೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜೀನಾಮೆ ನೀಡಿರುವ ಎಡಿಜಿಪಿ ರವೀಂದ್ರನಾಥ ಅವರಿಗೆ ದೌರ್ಜನ್ಯವಾಗಿದೆ. ಅನ್ಯಾಯ ಮಾಡಿರುವ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನಿಶ್ ಗೋಯಲ್ ಅವರ ಮೇಲೆ ಯಾವುದಾದರೂ ದಲಿತರ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದಾಗ ಮಾತ್ರ ದಕ್ಷ ಅಧಿಕಾರಿಗಳಿಗೆ ನ್ಯಾಯ ದೊರೆಯುತ್ತದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿದ ಶುಭ ಸಮಾಂಭದಲ್ಲಿ ಕರ್ನಾಟಕ ಭೀಮ್ ಸೇನೆ ನೂತನ ಸಂಘಟನೆ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಕರ್ನಾಟಕದ ಅಂಬೇಡ್ಕರ್ ಹೋರಾಟದ ರಥವನ್ನು ಬಹಳ ಯಶಸ್ವಿಯಾಗಿ ಮುನ್ನಡೆಸ ತಕ್ಕಂತ ಕೆಲಸ ಆಗುತ್ತದೆ. ಆ ನಿಟ್ಟಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈ ಸಂಘಟನೆಯ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಮತ್ತು ಬೆಂಗಳೂರು ವಾರ್ಡ್ ಕಮಿಟಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭೀಮ್ ಯೋಧರಾಗಿ ಮುನ್ನಡೆಯಲಿ ಜೊತೆಗೆ ಎಲ್ಲರೂ ಜೊತೆಯಾಗಿ ಮುನ್ನಡೆಯೋಣ ಎಂದು ಸಂಘಟನೆಗೆ ಶುಭಾಶಯ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಕರ್ನಾಟಕ ಭೀಮ್ ಸೇನೆಯ ಗೌರವಾಧ್ಯಕ್ಷ ಸಂಪತ್ ಕುಮಾರ್, ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ, ಕಾರ್ಯಧ್ಯಕ್ಷರು ದೇವಿಕುಮಾರ್, ಕಾನೂನು ಸಲಹೆಗಾರ. ಎಲ್ , ಉಮಾಶಂಕರ್, ಮಹಿಳಾ ರಾಜ್ಯಾಧ್ಯಕ್ಷೆ ಶ್ರೀಮತಿ ಜಯಮ್ಮ,ರಾಜ್ಯ ಮಹಿಳಾ ಗೌರವಾಧ್ಯಕ್ಷರು ಶ್ರೀಮತಿ ಉಮಾದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಲಲಿತಾವಾಣಿ ಮತ್ತಿತರರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು