ಸರ್ಕಾರಿ ನೌಕರರ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಸರ್ಕಾರಿ ನೌಕರರ ವರ್ಗಾವಣೆಯನ್ನು, ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಿನಲ್ಲಿ ಮಾತ್ರ ಅವಕಾಶ ನೀಡಿದೆ.
ಈ ಹಿಂದೆ ಸಾರ್ವತ್ರಿಕ ವರ್ಗಾವಣೆಯಲ್ಲಿ ಸಿಎಂ ಅನುಮೋದನೆಯನ್ನು ಪಡೆಯಬೇಕಾಗಿತ್ತು, ಆದರೆ ಈಗ 2021-22ನೇ ಸಾಲಿಗೆ ಸಂಬಂಧಪಟ್ಟಂತೆ ಗ್ರೂಪ್ ಬಿ ಸಿ ಮತ್ತು ಡಿ ಅಧಿಕಾರಿ/ನೌಕರರಿಗೆ ಅನ್ವಯ ಮಾಡುವಂತೆ ಬದಲಾವಣೆ ತಂದಿದೆ.
ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಯನ್ನು ಅನುಮೋದಿಸಲು ಅಯಾ ಇಲಾಖೆಯ ಸಚಿವರಗಳು ಅಧಿಕಾರವನ್ನು ಹೊಂದಿರುತ್ತಾರೆಈ ಆದೇಶವನ್ನು ಹೊರಡಿಸಿದ ಒಂದು ತಿಂಗಳ ಅವಧಿಗೆ ಮಾತ್ರ ಈ ಅಧಿಕಾರವನ್ನು ಆಯಾ ಸಚಿವರು ಚಲಾಯಿಸಬಹುದಾಗಿದ.
ವರ್ಗಾವಣೆ ಮಾಡಿದ ಜಾಗಕ್ಕೆ ಯಾವುದೇ ಕಾರಣಕ್ಕೂ ಮತ್ತೊಂದು ವರ್ಗಾವಣೆ ಮೂಲಕ ಭರ್ತಿ ಮಾಡುವಂತಿಲ್ಲ ಮುಂದಿನ ಸಾರ್ವತ್ರಿಕ ವರ್ಗಾವಣೆ ಮುಗಿಯುವ ತನಕ ಅವಧಿ ಪೂರ್ಣ, ವರ್ಗಾವಣೆಯನ್ನು ಕೋರಿ ಯಾವುದೇ ಪ್ರಸ್ತಾಪವನ್ನು ಸಿಎಂಗೆ ಕಳುಹಿಸುವಂತಿಲ್ಲ ಎಂದು ತಿಳಿಸಿದೆ.