ಬೆಂಗಳೂರು: ರಾಜ್ಯದಲ್ಲಿ ಇಂದು ೫೪ ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ೧೧೪೬ಕ್ಕೆ ಏರಿದೆ. ಮಂಡ್ಯದಲ್ಲಿ ಇಂದು ೨೧ ಮಂದಿ ಸೋಂಕು ದೃಢವಾಗಿದ್ದು, ಆತಂಕ ಸೃಷ್ಟಿಯಾಗಿದೆ.
ಮಂಡ್ಯ ೨೨ , ಕಲಬುರ್ಗಿ ೧೧ , ಧಾರವಾಡ ೪, ಹಾಸನ ೬, ದಕ್ಷಿಣ ಕನ್ನಡ ೨, ಉಡುಪಿ ೧, ಶಿವಮೊಗ್ಗ ೨, ಬೆಳಗಾವಿ ಕೋಲಾರ ೨, ಯಾದಗಿರಿ ೩, ವಿಜಯಪುರದಲ್ಲಿ ೧ ಪ್ರಕರಣ ದೃಢವಾಗಿದೆ. ಈ ಸೋಂಕಿತರ ಪಟ್ಟಿಯಲ್ಲಿ ಒಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.♂