ಸಂಘಪರಿವಾರದವರಿಗೆ ಕುರ್ಚಿ ವ್ಯಾಮೋಹವಿಲ್ಲ ಅವರು ಕುರ್ಚಿಗಾಗಿ ಎಂದೂ ಹೋರಾಡಿಲ್ಲ. ಸಮಾಜ ಸೇವೆಗಾಗಿ ಸಂಘ ಸಮರ್ಪಣೆ ಮಾಡಿಕೊಂಡಿದೆ ಹಾಗೂ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದೆ ಎಂದ ಅವರು ಕುರ್ಚಿ ವ್ಯಾಮೋಹ ಜೆಡಿಎಸ್, ಕಾಂಗ್ರೆಸ್ಸಿಗಿದೆ ಎಂದರು.
ಅಲ್ಪಸಂಖ್ಯಾತರ ಉದ್ಧಾರಕರು ಅಂತ ಹೇಳಿಕೊಳ್ತಾರೆ, ಟಿಪ್ಪು ಜಯಂತಿ ಮಾಡಿದ್ರು, ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ರು ಇಂದು ಅವರಿಗೂ ಇವರ ಬಂಡವಾಳ ಗೊತ್ತಾಗಿದೆ ಎಂದರು.ಓಟ್ ಬ್ಯಾಂಕ್ ಗಾಗಿ ಸಂಘದ ಬಗ್ಗೆ ಹೇಳಿಕೆ ನೀಡ್ತಿದ್ದಾರೆ. ಹಿಂದೆ ಕೆಪಿಎಸ್ಸಿ ಚೇರ್ಮನ್ ಜೈಲಿಗೆ ಹೋಗಿದ್ರು. ಯಾರು ಪ್ರತಿಭಾವಂತರಿದ್ದಾರೆ ಅವರು ಸಂಘದಲ್ಲಿರಬಹುದು ಅವರಿಗೆ ಸಂಘ ಒಳ್ಳೆಯ ಮಾರ್ಗದರ್ಶನ ಮಾಡುತ್ತದೆ ಎಂದ ಅವರು ನೀವೊಮ್ಮೆ ಸಂಘಕ್ಕೆ ಬಂದು ನೋಡಿ ಎಂದು ಆಹ್ವಾನ ನೀಡಿದರು.
ಆರ್ ಎಸ್ ಎಸ್ ಬಗ್ಗೆ ಅನಗತ್ಯ ಟೀಕೆ ಸರಿಯಲ್ಲ, ತಾಲಿಬಾನ್ ಸಂಸ್ಕೃತಿ ಆರ್ ಎಸ್ ಎಸ್ ನದ್ದಲ್ಲ ಎಂದ ಅವರು ತಾಲಿಬಾನ್ ಸಂಸ್ಕೃತಿ ನಿಮ್ಮದು, ಕೊಳ್ಳಿಯಿಡುವ ಸಂಸ್ಕೃತಿ ನಿಮ್ಮದು, ವಿಕೃತ ಮನಸ್ಸಿನವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು.