ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುವ ಸಲುವಾಗಿ ಬಿಜೆಪಿ ಸರ್ಕಾರದ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿಯ ಹಳೆ ಹುಬ್ಬಳ್ಳಿ ಹೆಗ್ಗೇರಿ ರುದ್ರ ಭೂಮಿ ಸ್ವಚ್ಚತಾ ಕಾರ್ಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮುನ್ನುಡಿ ಬರೆದರು.
ಈ ಸ್ವಚ್ಚತಾ ಮತ್ತು ಅಭಿವೃದ್ಧಿ ಅಭಿವೃದ್ಧಿ ಅಭಿಯಾನದಲ್ಲಿ ಸ್ವತಃ ಪ್ರಲ್ಹಾದ ಜೋಶಿಯವರು ತೊಡಿಕೊಂಡು ಸಾಕ್ಷಿಯಾದರು. ಪಕ್ಷದ ಕಾರ್ಯಕರ್ತರು ಮತ್ತು ಮಹಾನಗರ ಪಾಲಿಕೆ ಪೌರಕಾರ್ಮಿಕರು ಇಡೀ ರುದ್ರಭೂಮಿ ಸ್ವಚ್ಚಗೊಳಿಸಿ ಗಿಡ ನೆಟ್ಟರು.
ಅಜಾತ ಶತ್ರು, ಭಾರತರತ್ನ, ಮಾಜಿ ಪ್ರಧಾನಿ ಶ್ರೀ #ಅಟಲ್_ಬಿಹಾರಿ_ವಾಜಪೇಯಿ ಅವರ #ಜನ್ಮದಿನದ ನಿಮಿತ್ತ ಇಂದು ನಡೆದ #ಸ್ವಚ್ಛತಾಅಭಿಯಾನ ದಲ್ಲಿ ಪಾಲ್ಗೊಂಡಿದ್ದು. ಈ ಕಾರ್ಯಕ್ರಮದ ಅಡಿ ಹಳೇ-ಹುಬ್ಬಳ್ಳಿಯ #ಹೆಗ್ಗೇರಿ #ರುದ್ರಭೂಮಿ ಯನ್ನು ಸ್ವಚ್ಚಗೊಳಿಸುವುದು, ಗಿಡ ನೆಡುವ ಕಾರ್ಯಕ್ರಮ ಹಾಗೂ ಆವರಣದ ಗೋಡೆಗೆ ಬಣ್ಣ ಹಚ್ಚುವ ಕಾರ್ಯ ಕೈಗೊಳ್ಳಲಾಯಿತು. pic.twitter.com/RfEMqbiMb8
— Pralhad Joshi (Modi Ka Parivar) (@JoshiPralhad) December 25, 2021
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೋದಿಯವರ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಸೂಚಿಸಿದ್ದರು ಅದರಂತೆ ಈ ರುದ್ರಭೂಮಿ ಸ್ವಚ್ಚತೆಯಿಲ್ಲದ ಕಾರಣ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಎಲ್ಲ ಪಕ್ಷದ ಕಾರ್ಯಕರ್ತರು ಮತ್ತು ಪಾಲಿಕೆ ಸಿಬ್ಬಂದಿಯಿಂದ ರುದ್ರಾಭೂಮಿ ಸ್ವಚ್ಚತೆ ಮತ್ತು ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ವಚ್ಚತಾ ಕಾರ್ಯ ಒಂದು ದಿನಕ್ಕೆ ಮುಗಿಯುವುದಿಲ್ಲ. ಸಂಪೂರ್ಣ ಶುಚಿಗೊಳಿಸಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿ ಪಾಲಿಕೆಯವರಿಗೆ ನೀಡಲಾಗುತ್ತದೆ ಮುಂದೆ ಅವರು ಇದರ ಸಂಪೂರ್ಣ ಜವಾಬ್ದಾರಿ ಹೊತ್ತು ನೋಡಿಕೊಂಡು ಹೋಗುತ್ತಾರೆ ಎಂದರು.
ಅವಳಿನಗರದ ಸ್ಮಾರ್ಟ್ ಸಿಟಿ ಯೋಜನೆಗಳು ಸ್ವಲ್ಪ ವಿಳಂಬವಾಗಿದ್ದವು, ಆದರೆ ಈಗ ತೀವ್ರ ಗತಿಯಲ್ಲಿ ನಡೆಯುತ್ತವೆ. ಹಿಂದೆ ಎಲ್ಲ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬೇಗ ಮುಗಿಸಲು ತಿಳಿಸಲಾಗಿತ್ತು. ಸದ್ಯದಲ್ಲೇ ಇನ್ನೊಂದು ಸಭೆ ಕರೆದು ಕಾಮಗಾರಿ ಬೇಗ ಮುಗಿಸಲು ಸೂಚಿಸಲಾಗುತ್ತದೆ ಎಂದರು.