ಬೆಂಗಳೂರು: ರಾಜ್ಯ ಸರ್ಕಾರವು ಸುಮಾರು 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಣೆ ಮಾಡಿದ್ದು, ಈ ತಾಲೂಕುಗಳಿಗೆ ಹೆಚ್ಚುವರಿ ಸಂಪನ್ಮೂಲ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಕಂದಾಯ ಇಲಾಖೆಯು ಬಿಡುಗಡೆ ಮಾಡಿರುವಂತಹ ಆದೇಶ ಪ್ರಕಾರ ದಕ್ಷಿಣ ಕನ್ನಡದ ಆರು ತಾಲೂಕುಗಳು, ಬೆಳಗಾವಿ 14, ಉತ್ತರ ಕನ್ನಡ 10, ಕಲಬುರಗಿ 9, ಬಾಗಲಕೋಟೆ 9, ಧಾರವಾಡ 7, ಶಿವಮೊಗ್ಗ 7, ಉಡುಪಿ 7, ಚಿಕ್ಕಮಗಳೂರು 6, ಹಾವೇರಿ 6, ಬಳ್ಳಾರಿ 6, ರಾಯಚೂರು 5, ಬೀದರ್ 5, ಹಾಸನ 5, ಮೈಸೂರು 4, ವಿಜಯಪುರ 4, ಗದಗ 4, ಕೊಡಗು, ಕೊಪ್ಪ ಮತ್ತು ದಾವಣಗೆರೆಯ ತಲಾ ಮೂರು ಮತ್ತು ಚಾಮರಾಜಪೇಟೆ, ಮಂಡ್ಯದ ತಲಾ ಒಂದು ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ.