ಬೆಂಗಳೂರು : ರಾಜ್ಯದಲ್ಲಿ ಶನಿವಾರ ಒಟ್ಟು 983 ಮಂದಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ , 21 ಮಂದಿ ಸಾವನ್ನಪ್ಪಿದ್ಧಾರೆ. ರಾಜ್ಯದಲ್ಲಿ ಕರೋನಾ ಕಡಿಮೆ ಪ್ರಮಾಣದಲ್ಲಿದೆ, ಆದರೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಕೊರೋನಾ ಕಡಿಮೆಯಿದೆ ಎಂದು ಮೈಮರೆಯಬೇಡಿ. ಯಾವಾಗ ಬೇಕಾದರೂ ಕೇಸ್ ಹೆಚ್ಚಾಗಬಹುದು. ಸರ್ಕಾರ, ಬಿಬಿಎಂಪಿ ಕೇಸ್ಗಳನ್ನು ಹತೋಟಿಯಲ್ಲಿಟ್ಟಿದೆ. ಜನ ಸರಳವಾಗಿ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವುದು ಒಳ್ಳೆಯದು. ಗಣೇಶ ಕೂರಿಸುವ ಬಗ್ಗೆ ಕೆಲವು ನಿಬಂಧನೆಗಳನ್ನು ಹಾಕಲಾಗಿದೆ. ಈ ಬಗ್ಗೆ ಇನ್ನೊಂದು ಸುತ್ತಿನ ಪರಿಶೀಲನೆ ನಡೆಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.