News Karnataka Kannada
Saturday, May 04 2024
ಬೆಂಗಳೂರು

ಮುಖ್ಯಮಂತ್ರಿ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಗೆ ಬಂದೇ ಬರ್ತಾರೆ : ಶಾಸಕ ಎನ್. ಮಹೇಶ್

N Mahesh 02082021
Photo Credit :

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಚಾಮರಾಜನಗರ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು..? ಅವ್ರು ಜಿಲ್ಲೆಗೆ ಹೆಲಿಕಾಪ್ಟರ್​​ನಲ್ಲೇ ಬರ್ತಾರೆ ಎಂದು ಹೇಳಿದ  ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ವಿರುದ್ದ  ಬಿಜೆಪಿ ಶಾಸಕ ಎನ್ ಮಹೇಶ್ ಮಾತಿನ  ಛಾಟಿ  ಬೀಸಿದ್ದಾರೆ .

ಬೆಂಗಳೂರಿನ ಇಂದಿರಾ ಗಾಂಧಿ ಸರ್ಕಲ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಆಕ್ಯಾ ಆಸ್ಪತ್ರೆ ಉದ್ಘಾಟನೆ ನಂತರ ಮಾತಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ನೂತನವಾಗಿ 164 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ವಾಗಿದ್ದು, ಇದೀಗ ಅದು ಉದ್ಘಾಟನೆ ಹಂತಕ್ಕೆ ಬಂದು ನಿಂತಿದೆ.

ಇದೀಗ ಅದನ್ನು ಉದ್ಘಾಟನೆ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬರಬೇಕಿತ್ತು. ಈಗಾಗಲೇ ಈ ಕಾರ್ಯಕ್ರಮ ಕೂಡ ನಿಗದಿಯಾಗಿತ್ತು. ಆದರೆ ಕೋವಿಡ್​​ನಿಂದ ಆ ಕಾರ್ಯಕ್ರಮ ನಿಂತಿದೆ. ಇವಾಗ ಅದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮೂಢ ನಂಬಿಕೆ ಅನ್ನೋದು ಏನು ಇಲ್ಲ. ಅವರು  ನಮ್ಮ ಜಿಲ್ಲೆಗೆ ಬರ್ತಾರೆ, ಅವರು ನಮ್ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು.. ಅವರು ಹೆಲಿಕಾಪ್ಟರ್ ನಲ್ಲೇ ಜಿಲ್ಲೆಗೆ ಬರ್ತಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿಗೆ ತಿರುಗೇಟು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು