ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಚಾಮರಾಜನಗರ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು..? ಅವ್ರು ಜಿಲ್ಲೆಗೆ ಹೆಲಿಕಾಪ್ಟರ್ನಲ್ಲೇ ಬರ್ತಾರೆ ಎಂದು ಹೇಳಿದ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ವಿರುದ್ದ ಬಿಜೆಪಿ ಶಾಸಕ ಎನ್ ಮಹೇಶ್ ಮಾತಿನ ಛಾಟಿ ಬೀಸಿದ್ದಾರೆ .
ಇದೀಗ ಅದನ್ನು ಉದ್ಘಾಟನೆ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬರಬೇಕಿತ್ತು. ಈಗಾಗಲೇ ಈ ಕಾರ್ಯಕ್ರಮ ಕೂಡ ನಿಗದಿಯಾಗಿತ್ತು. ಆದರೆ ಕೋವಿಡ್ನಿಂದ ಆ ಕಾರ್ಯಕ್ರಮ ನಿಂತಿದೆ. ಇವಾಗ ಅದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮೂಢ ನಂಬಿಕೆ ಅನ್ನೋದು ಏನು ಇಲ್ಲ. ಅವರು ನಮ್ಮ ಜಿಲ್ಲೆಗೆ ಬರ್ತಾರೆ, ಅವರು ನಮ್ ಜಿಲ್ಲೆಗೆ ಬರೋಕೆ ತಾಕತ್ತು ಯಾಕೆ ಬೇಕು.. ಅವರು ಹೆಲಿಕಾಪ್ಟರ್ ನಲ್ಲೇ ಜಿಲ್ಲೆಗೆ ಬರ್ತಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿಗೆ ತಿರುಗೇಟು ನೀಡಿದ್ದಾರೆ.