News Karnataka Kannada
Friday, May 17 2024
ಬೆಂಗಳೂರು

ಮಳೆಯಿಂದ ಉರುಳಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಮಾಲೀಕ ಸಾವು!

Woman killed in accident, son Ashwin and husband critically injured
Photo Credit :

ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆಯ ಪರಿಣಾಮ ಉರುಳಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಮಾಲಿಕ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ 4.30ಕ್ಕೆ ನಡೆದಿದೆ.

ಬಿಎಸ್ ನಾಗರಾಜ್ ಧನ್ಯ ಅವರ ತಲೆಗೆ ತೀವ್ರವಾದ ಗಾಯಗಳಾಗಿದ್ದರಿಂದ ಮೃತಪಟ್ಟಿದ್ದಾರೆ. ಬಿಎಸ್ ನಾಗರಾಜ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ಹೊಟೇಲ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿಯಾಗಿದ್ದರು.” ಬಿಬಿಎಂಪಿ ನೀಡಿರುವ ಮಾಹಿತಿಯ ಪ್ರಕಾರ ಕಂಟ್ರೋಲ್ ರೂಮ್ ಮಳೆಯಿಂದಾಗಿ ಮರಗಳು ಧರೆಗುರುಳಿರುವ 7 ಘಟನೆಗಳು ವರದಿಯಾಗಿದೆ.

ಬಿಎಸ್ ನಾಗರಾಜ್ ಧನ್ಯ ಮೃತ ದುರ್ದೈವಿಯಾಗಿದ್ದು, ತಮ್ಮ ಹೊಟೇಲ್ ವಾದಿರಾಜ್ ಗೆ ತೆರಳುತ್ತಿದ್ದಾಗ ಈ ಘಟನೆ ವರದಿಯಾಗಿದೆ. ಕತ್ತಲಿದ್ದರಿಂದ ಧರೆಗುರುಳಿದ್ದ ಮರ ವಾಹನ ಸವಾರನಿಗೆ ಕಾಣಲಿಲ್ಲ. ಆದ್ದರಿಂದ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಜಯನಗರದ ಅಪೋಲೋ ಆಸ್ಪತ್ರೆಗೆ ಸೇರಿಸುವ ವೇಳೆಗೆ ಆತ ಮೃತಪಟ್ಟಿದ್ದಾರೆ. ಹೊಟೆಲ್ ಅಸೋಸಿಯೇಷನ್ ನ ಮಾಲಿಕರಾದ ಪಿಸಿರಾವ್ ಈ ಅಪಘಾತದ ಘಟನೆಯನ್ನು ದೃಢಪಡಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು