ಬೆಂಗಳೂರು : ನಂದಿನಿ ಹಾಲು ಸರಬರಾಜು ಕಂಟೈನರ್ ಲಾರಿ ಮತ್ತು ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಘಟನೆ ಸಿಎಂ ಬಸವರಾಜ ಬಮ್ಮಾಯಿಯ ಬೆಂಗಳೂರು ನಿವಾಸದ ಕೂಗಳತೆ ದೂರದಲ್ಲಿ ನಡೆದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಂಟೈನರ್ ಮತ್ತು ಆ್ಯಂಬುಲೆನ್ಸ್ ಚಾಲಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರ್ ಸಿ ರೋಡ್ ನ ತಾಜ್ ಎಂಡ್ ಮುಂದೆ ಈ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ಅವೈಡ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ. ಕಂಟೈನರ್ ಅಫಘಾತದ ರಭಸಕ್ಕೆ ಡಿವೈಡರ್ ಮೇಲೆ ಬಿದ್ದಿದೆ.
ಈ ಪ್ರಕರಣ ಹೈಗ್ರೌಂಡ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಫಘಾತದ ಬಳಿಕ ಮತ್ತೊಂದು ಕಂಟೈನರ್ ಕರೆಸಿ ಹಾಲನ್ನು ಅದರಲ್ಲಿ ಲೋಡ್ ಮಾಡಲಾಗಿದೆ.