ಬೆಂಗಳೂರು : ಕೊರೋನಾ ಹೊಡೆತದಿಂದ ಜನ ಈಗಿನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೆ ಬಂದ್ ಮಾಡಿ ತೊಂದರೆ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಪರೀಕ್ಷೆಗಳು ಬಂದ್ ಕಾರಣ ಮುಂದೂಡಲ್ಪಟ್ಟಿವೆ. ಅಂಗಡಿ, ಮುಂಗಟ್ಟುಗಳಿಗೆ ಜನ ತೆರಳದಿದ್ದರೆ ಅವರಿಗೂ ವ್ಯಾಪಾರ ಆಗುವುದಿಲ್ಲ. ಜೊತೆಗೆ ಬಂದ್ನಿಂದ ಟ್ರಾಫಿಕ್ ಸಮಸ್ಯೆಯೂ ಆಗುತ್ತದೆ ಎಂದು ಹೇಳಿದ್ದಾರೆ.
ಭಾರತ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ, ಬದಲಾಗಿ ವೈಯಕ್ತಿಕ ಹಿನ್ನೆಲೆ ಹೋರಾಟ ನಡೆಸುವುದಾದರೆ ನಡೆಸಿ ಎಂದು ಹೇಳಿದ್ದಾರೆ.