News Karnataka Kannada
Tuesday, May 07 2024
ಬೆಂಗಳೂರು

ಬಿಟ್ ಕಾಯಿನ್ ಅಂದ್ರೆ ಕೇವಲ ಕನ್ನಡಿಯೊಳಗಿನ ಗಂಟು: ಸಚಿವ ಆರಗ ಜ್ಞಾನೇಂದ್ರ

Aaraga Jnanendra
Photo Credit :

ಬಿಟ್ ಕಾಯಿನ್‌ನಲ್ಲಿ ಯಾರೂ ಯಾಮಾರಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರೈವೇಟ್ ಕೀ ಇರುತ್ತೆ. ಏನೇ ಆದ್ರೂ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಅವರು ಬಿಟ್ಟು ಕಳಿಸಿದ್ದ ಶ್ರೀಕಿಯನ್ನು ಬಂಧಿಸಿದ್ದು ನಾವು. ಶ್ರೀಕಿಯನ್ನ ಪಾರದರ್ಶಕವಾಗಿ ವಿಚಾರಣೆ ನಡೆಸಿದ್ದು ನಾವು. ಕೇಂದ್ರ ಸರ್ಕಾರ, ಇಂಟರ್‌ಪೋಲ್, ಇಡಿಗೆ ತಿಳಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಹೇಳಿದ್ದಾರೆ.

ಕಾಂಗ್ರೆಸ್ ಮಿತ್ರರು 1 ಸುಳ್ಳನ್ನು ನೂರು ಬಾರಿ ಹೇಳ್ತಿದ್ದಾರೆ. ಅದೇ ಸುಳ್ಳನ್ನು ಸತ್ಯ ಮಾಡಬಹುದು ಎಂದು ತಿಳಿದಿದ್ದಾರೆ. 2018ರಲ್ಲಿ ಅವರದೇ ನಾಯಕರ ಮಕ್ಕಳು ಶ್ರೀಕಿ ಜತೆಗಿದ್ದರು. ಆಗ ಶ್ರೀಕಿಯನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ. ಇದನ್ನು ರಾಜ್ಯದ ಜನರಿಗೆ ಕಾಂಗ್ರೆಸ್ ನಾಯಕರು ತಿಳಿಸಲಿ. ಕೈ ನಾಯಕರ ಮಕ್ಕಳು ಶ್ರೀಕಿ ಜತೆ ಹೋಟೆಲ್‌ನಲ್ಲಿದ್ದರು. ಶ್ರೀಕಿ ಜತೆ ಹೋಟೆಲ್‌ನಲ್ಲಿ ಇದ್ದಿದ್ದು ಏಕೆಂದು ಉತ್ತರಿಸಲಿ. ನಾವು ಅತ್ಯಂತ ಪಾರದರ್ಶಕವಾಗಿ ವಿಚಾರಣೆ ನಡೆಸಿದ್ದೇವೆ. ಬಿಟ್ ಕಾಯಿನ್ ಅಂದ್ರೆ ಕೇವಲ ಕನ್ನಡಿಯೊಳಗಿನ ಗಂಟು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಟ್ಯಾಂಗೋ ಆಯಪ್ ಮೂಲಕ ಅಶ್ಲೀಲ ವ್ಯವಹಾರ ವಿಚಾರವಾಗಿ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಆನ್‌ಲೈನ್ ಗ್ಯಾಂಬ್ಲಿಂಗ್ ತಡೆಗೆ ಕಾನೂನು ತಂದಿದ್ದೇವೆ. ಅವರು ಕೋರ್ಟ್‌ನಲ್ಲಿ ವಾದ ಮಾಡುತ್ತಿದ್ದಾರೆ. ಅವುಗಳ ನಿಯಂತ್ರಣಕ್ಕೆ ಕೋರ್ಟ್, ಕಾನೂನು ಎಲ್ಲ ಇದೆ. ಈಗಿರುವ ಕಾಯ್ದೆ ಅಡಿ ನಿಯಂತ್ರಿಸಬಹುದಾ ನೋಡ್ತೇವೆ. ಅಗತ್ಯ ಬಿದ್ದರೆ ಹೊಸ ಕಾಯ್ದೆ ತರಲು ನಾವು ಸಿದ್ಧರಿದ್ದೇವೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.

ಬೊಮ್ಮಾಯಿ ಸರ್ಕಾರದ ಬಗ್ಗೆ ಜನ ಸಂತೋಷಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಕಳೆದುಹೋಗಿದ್ದಾರೆ. ಕಾಂಗ್ರೆಸ್‌ನವರಿಗೆ ಹೇಳಲು ವಿಷಯಗಳೇ ಇಲ್ಲದ ಹಿನ್ನೆಲೆ, ಇಲ್ಲದಿರುವ ವಿಚಾರ ದೊಡ್ಡದು ಮಾಡಿ ಪೋಸ್ ಕೊಡ್ತಿದ್ದಾರೆ. ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಅಂತ ಪದೇಪದೆ ಹೇಳ್ತಿದ್ದಾರೆ. ಕಾಂಗ್ರೆಸ್‌ನವರ ಹೇಳಿಕೆಯಿಂದ ಅನುಮಾನ ಮೂಡುತ್ತಿದೆ. ಕಾಂಗ್ರೆಸ್‌ನವರೇ ಆರೋಪಿ ಶ್ರೀಕಿಗೆ ಏನಾದ್ರೂ ಮಾಡಿ, ಸರ್ಕಾರದ ತಲೆಗೆ ಕಟ್ಟುತ್ತಾರಾ ಎಂಬ ಅನುಮಾನ ಇದೆ. ಶ್ರೀಕಿಗೆ ಪ್ರಾಣ ಬೆದರಿಕೆ ಬಗ್ಗೆ ಸಿಎಂ ಜತೆ ಮಾತನಾಡ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು