News Karnataka Kannada
Saturday, May 11 2024
ಬೆಂಗಳೂರು

ಪುನೀತ್​ ರಾಜ್​ಕುಮಾರ್​ ಮೊದಲು ಹೋಗಿದ್ದ ಕ್ಲಿನಿಕ್​ನ ಸಿಸಿ ಟಿವಿ ಫೂಟೇಜ್ ​ಬಿಡುಗಡೆ ಮಾಡಿ : ಅಭಿಮಾನಿ

Punith
Photo Credit :

ಬೆಂಗಳೂರು : ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನರಾದ ದಿನ ಅವರು ಮೊದಲು ಹೋಗಿದ್ದ ಡಾ.ರಮಣ್​ರಾವ್​ ಕ್ಲಿನಿಕ್​ನ ವಿಡಿಯೋ ಫೂಟೇಜ್​ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಅವರ ಅಭಿಮಾನಿ ಎನ್ನಲಾದ ಅರುಣ್​ ಪರಮೇಶ್ವರ್​ ಆಗ್ರಹಿಸಿದ್ದಾರೆ.
ಡಾ.ರಮಣರಾವ್​ ಕ್ಲಿನಿಕ್​ನಲ್ಲಿ ಪುನೀತ್​​ಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆಪಾದಿಸಿ ತನಿಖೆ ಕೋರಿ ಪೊಲೀಸರಿಗೆ ದೂರು ನೀಡಿರುವ ಕುರುಬರಹಳ್ಳಿಯ ಅರುಣ್​ ಪರಮೇಶ್ವರ್ ಇಂದು ದಿಗ್ವಿಜಯ ನ್ಯೂಸ್​​ನೊಂದಿಗೆ ಮಾತನಾಡಿದರು.

‘ಪ್ರಾಥಮಿಕ ಚಿಕಿತ್ಸೆಗಾಗಿ ಅಪ್ಪು ತೆರಳಿದ ಕ್ಲಿನಿಕ್​ನಲ್ಲಿ ಏನು ನಡೆಯಿತು? ಪುನೀತ್​ ಪ್ರಾಣ ಉಳಿಸಬಹುದಾಗಿದ್ದ ಗೋಲ್ಡನ್​ ಅವರ್​ ಯಾಕೆ ಮಿಸ್​ ಆಯ್ತು? ಪುನೀತ್​​ರನ್ನು ಆಸ್ಪತ್ರೆಗೆ ಆಯಂಬುಲೆನ್ಸ್​ನಲ್ಲಿ ಯಾಕೆ ಕಳಿಸಲಿಲ್ಲ? ಇವೆಲ್ಲಾ ಪ್ರಶ್ನೆಗಳು ಬಹುತೇಕ ಅಭಿಮಾನಿಗಳನ್ನು ಕಾಡುತ್ತಿವೆ. ಹೀಗಿರುವಾಗ ಅಂದಿನ ಕ್ಲಿನಿಕ್​ನ ಸಿಸಿಟಿವಿ ಫೂಟೇಜನ್ನು ರಿಲೀಸ್​ ಮಾಡದೇ ಇರೋದು ಹೆಚ್ಚು ಅನುಮಾನಗಳಿಗೆ ಆಸ್ಪದ ನೀಡ್ತಾ ಇದೆ. ಡಾ.ರಮಣರಾವ್​ ಮುಂಚೆ ಬೇರೆ ರೀತಿ ಹೇಳಿದ್ದರು, ಈಗ ಬೇರೆ ರೀತಿ ಹೇಳ್ತಾ ಇದ್ದಾರೆ. ಆದ್ದರಿಂದ ಸಿಸಿಟಿವಿ ಫೂಟೇಜನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಪರಮೇಶ್ವರ್​ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು