News Karnataka Kannada
Sunday, May 19 2024
ಬೆಂಗಳೂರು

ದೇವರು ಪುನೀತ್​ ಬದಲು ನನ್ನನ್ನು ಕರೆದುಕೊಳ್ಳಬಹುದಿತ್ತು: ನಟ ಶರತ್​ಕುಮಾರ್

Photo Credit :

‘ಪುನೀತ ನಮನ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶರತ್​ಕುಮಾರ್​ ತಮ್ಮ ಓಡಾಟವನ್ನು ಹೇಳಿದ್ದಾರೆ.
‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್​ ತಂದೆಯ ಪಾತ್ರವನ್ನು ಮಾಡಿದ್ದರು ಶರತ್​ಕುಮಾರ್​.

ಈ ಸಿನಿಮಾ 100 ದಿನದ ಸಂಭ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಈಗ ಅದೇ ಅರಮನೆ ಮೈದಾನದಲ್ಲಿ ಪುನೀತ್​ಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್​ ಕುಮಾರ್​ ಭಾವುಕರಾದರು. ದೇವರು ಪುನೀತ್​ ಬದಲು ನನ್ನನ್ನು ಕರೆದುಕೊಳ್ಳಬಹುದಿತ್ತು ಎನ್ನುವ ಮಾತನ್ನು ಹೇಳಿದರು.

‘ಪುನೀತ್​ ನಮ್ಮನ್ನು ಬಿಟ್ಟು ಹೋಗಿದ್ದು ನಂಬೋಕೆ ಆಗಿಲ್ಲ. ‘ರಾಜಕುಮಾರ’ ಸಿನಿಮಾ 100 ದಿನದ ಸಂಭ್ರಮವನ್ನು ಇಲ್ಲಿಯೇ ಮಾಡಿದ್ದೆವು. ಈಗ ಇಲ್ಲಿ ಪುನೀತ್​ಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ಖಂಡಿತವಾಗಿಯೂ ನಾನು ಇದನ್ನು ಅಂದುಕೊಂಡಿರಲಿಲ್ಲ. ನನಗೆ ಈಗ 67 ವರ್ಷ. ಬಹುಶಃ ಪುನೀತ್​ ನನ್ನ ಶ್ರದ್ಧಾಂಜಲಿಗೆ ಬರಹುದು ಎಂದುಕೊಂಡಿದ್ದೆ. ದೇವರು ಪುನೀತ್​ ಬದಲಿಗೆ ನನ್ನನ್ನು ಕರೆದುಕೊಳ್ಳಬಹುದಿತ್ತು. ನಾನು ಪುನೀತ್​ಗಾಗಿ ನನ್ನ ಜೀವಕೊಡೋಕು ಸಿದ್ಧನಿದ್ದೇನೆ. ಪುನೀತ್​ ಕುಟುಂಬ ನನಗೆ ತುಂಬಾನೇ ಕ್ಲೋಸ್​ ಆಗಿದೆ’ ಎಂದರು.

‘ನಾನು ಮೊದಲು ನಟಿಸಿದ್ದು ಕರ್ನಾಟಕದಲ್ಲಿ. ನನ್ನ ಮೊದಲ ವೇತನ ಪಡೆದಿದ್ದು ಇಲ್ಲಿಯೇ. ಈ ಕರ್ನಾಟಕ ನನಗೆ ಯಾವಾಗಲೂ ಹತ್ತಿರ. ನಾನು ಶಿವರಾಜ್​ಕುಮಾರ್ ಸಹಾಯಕ್ಕೆ ಸದಾ ಸಿದ್ಧನಿದ್ದೇನೆ. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ’ ಶರತ್​ಕುಮಾರ್​ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು