‘ಪುನೀತ ನಮನ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶರತ್ಕುಮಾರ್ ತಮ್ಮ ಓಡಾಟವನ್ನು ಹೇಳಿದ್ದಾರೆ.
‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್ ತಂದೆಯ ಪಾತ್ರವನ್ನು ಮಾಡಿದ್ದರು ಶರತ್ಕುಮಾರ್.
ಈ ಸಿನಿಮಾ 100 ದಿನದ ಸಂಭ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಈಗ ಅದೇ ಅರಮನೆ ಮೈದಾನದಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಕುಮಾರ್ ಭಾವುಕರಾದರು. ದೇವರು ಪುನೀತ್ ಬದಲು ನನ್ನನ್ನು ಕರೆದುಕೊಳ್ಳಬಹುದಿತ್ತು ಎನ್ನುವ ಮಾತನ್ನು ಹೇಳಿದರು.
‘ಪುನೀತ್ ನಮ್ಮನ್ನು ಬಿಟ್ಟು ಹೋಗಿದ್ದು ನಂಬೋಕೆ ಆಗಿಲ್ಲ. ‘ರಾಜಕುಮಾರ’ ಸಿನಿಮಾ 100 ದಿನದ ಸಂಭ್ರಮವನ್ನು ಇಲ್ಲಿಯೇ ಮಾಡಿದ್ದೆವು. ಈಗ ಇಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ಖಂಡಿತವಾಗಿಯೂ ನಾನು ಇದನ್ನು ಅಂದುಕೊಂಡಿರಲಿಲ್ಲ. ನನಗೆ ಈಗ 67 ವರ್ಷ. ಬಹುಶಃ ಪುನೀತ್ ನನ್ನ ಶ್ರದ್ಧಾಂಜಲಿಗೆ ಬರಹುದು ಎಂದುಕೊಂಡಿದ್ದೆ. ದೇವರು ಪುನೀತ್ ಬದಲಿಗೆ ನನ್ನನ್ನು ಕರೆದುಕೊಳ್ಳಬಹುದಿತ್ತು. ನಾನು ಪುನೀತ್ಗಾಗಿ ನನ್ನ ಜೀವಕೊಡೋಕು ಸಿದ್ಧನಿದ್ದೇನೆ. ಪುನೀತ್ ಕುಟುಂಬ ನನಗೆ ತುಂಬಾನೇ ಕ್ಲೋಸ್ ಆಗಿದೆ’ ಎಂದರು.
‘ನಾನು ಮೊದಲು ನಟಿಸಿದ್ದು ಕರ್ನಾಟಕದಲ್ಲಿ. ನನ್ನ ಮೊದಲ ವೇತನ ಪಡೆದಿದ್ದು ಇಲ್ಲಿಯೇ. ಈ ಕರ್ನಾಟಕ ನನಗೆ ಯಾವಾಗಲೂ ಹತ್ತಿರ. ನಾನು ಶಿವರಾಜ್ಕುಮಾರ್ ಸಹಾಯಕ್ಕೆ ಸದಾ ಸಿದ್ಧನಿದ್ದೇನೆ. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ’ ಶರತ್ಕುಮಾರ್ ಹೇಳಿದರು.