ಬೆಂಗಳೂರು : ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡು, ಅದೇ ನೀರನ್ನು ಜನರು ಕುಡಿದಿದ್ದರಿಂದಾಗಿ, 20ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇಧಿಯಾಗಿ ಅಸ್ವಸ್ಥಗೊಂಡಿರೋ ಘಟನೆ, ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿನ ಕಾವೇರಿ ನೀರು ಸಂಪರ್ಕವಿದೆ. ಹೀಗೆ ಬಿಡಲಾಗುತ್ತಿರುವಂತ ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡಿದೆ ಎನ್ನಲಾಗಿದೆ. ಇದೇ ನೀರನ್ನು ಬಡಾವಣೆಯ ಅನೇಕರು ಸೇವಿಸಿದ್ದರಿಂದಾಗಿ 20ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇಧಿ ಕಾಣಿಸಿಕೊಂಡು, ಅಸ್ವಸ್ಥಗೊಂಡಿದ್ದಾರೆ.
ಹೀಗೆ ಅಸ್ವಸ್ಥಗೊಂಡ ಜನರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 20ಜನರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಅಸ್ವಸ್ಥರಾಗಿರೋದು ಕಲುಷಿತ ನೀರು ಸೇವಿಸಿಯೇ ಎಂಬುದು ದೃಢಪಟ್ಟಿದೆ. ಹೀಗಿದ್ದೂ ಯಾರೊಬ್ಬ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಆಗಮಿಸಿ, ಅಸ್ವಸ್ಥರ ಆರೋಗ್ಯ ವಿಚಾರಿಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.