ಬೆಂಗಳೂರು : ಸೇವೆಯ ಸೋಗಿನಲ್ಲಿ ರಾಜಕಾರಣ ಮಾಡಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರ್ಎಸ್ಎಸ್ ವಿರುದ್ಧ ಮಾತನಾಡಿದ್ದಾರೆ. ಈ ಬಗ್ಗೆ ಎಚ್ಡಿಕೆ ಸರಣಿ ಟ್ವೀಟ್ ಮಾಡಿದ್ದು, ಆರ್ಎಸ್ಎಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜನರ ಬವಣೆಗಳನ್ನು ನಿವಾರಿಸಲು ದುಡಿಯಬೇಕೇ ಹೊರತು ಜನರ ಬದುಕಿಗೆ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಕೊಳ್ಳಿ ಇಡಬಾರದು, ಆರ್ಎಸ್ಎಸ್ ಹುಟ್ಟಿದಾಗಿನಿಂದಲೂ ಏನು ಮಾಡಿದೆ ಎನ್ನೋದು ಎಲ್ಲರಿಗೂ ಗೊತ್ತು ಎಂದಿದ್ದಾರೆ.
ನಾನು ಯಾರ ಪರವೂ ಅಲ್ಲ, ವಿರೋಧವೂ ಅಲ್ಲ, ತಪ್ಪು ಸರಿ ಚರ್ಚೆಯಾಗಲಿ ಎನ್ನುವುದು ನನ್ನ ಇಚ್ಛೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಎರಡು ಸಾವಿರ ಪರಿಹಾರಕ್ಕೆ ನೂರು ರೂ. ಲಂಚ ಕೇಳಿದ ಪ್ರಕರಣ ಬೆಳಕಿಗೆ ಬಂದಿದೆ. ಇದು ಸಮಾಜ ಸೇವೆಯಾ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರ್ಎಸ್ಎಸ್ ಶಾಖೆಗಳಲ್ಲಿ ಏನೂ ಹೇಳಿಕೊಡೋದಿಲ್ಲವಾ? ಎಂದು ಸಚಿವ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದ್ದಾರೆ.
ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು, ಆರ್ಎಸ್ಎಸ್ ಬಗ್ಗೆ ಜ್ಞಾನಾರ್ಜನೆಗೆ ಸಂಘದ ಶಾಖೆಗೆ ಬನ್ನಿ ಎಂದು ಸಚಿವ ಸಿ.ಟಿ. ರವಿ ಎಚ್ಡಿಕೆಗೆ ಆಹ್ವಾನ ನೀಡಿದ್ದರು.