ಬೆಳಗಾವಿ: ಪ್ರೀತಿಸಿದ ಹುಡುಗಿ ಜೊತೆ ಯುವಕ ಓಡಿ ಹೋದ ಕಾರಣ ಯುವಕನ ತಾಯಿಯನ್ನ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಸಂಬಂಧ ಏಳು ಜನರನ್ನ ಕಾಕತಿ ಪೊಲೀಸರು ನಿನ್ನೆಯೇ ಬಂಧಿಸಿದ್ದರು. ಸದ್ಯ ತಡರಾತ್ರಿ 4 ಜನ ಮಹಿಳಾ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ನ್ಯಾಯಾಧೀಶರ ಮುಂದೆ ಮಹಿಳಾ ಆರೋಪಿಗಳನ್ನ ಹಾಜರು ಪಡಿಸಲಾಗಿದ್ದು ನಾಲ್ಕು ಜನ ಮಹಿಳಾ ಆರೋಪಿಗಳನ್ನು ತಡ ರಾತ್ರಿಯೇ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಬಸಪ್ಪ ನಾಯಕ್, ರಾಜು ನಾಯಕ್, ಕೆಂಪಣ್ಣ ಎಂಬ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಆರೋಪಿಗಳನ್ನ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿ ಪಡೆಯಲಿದ್ದಾರೆ.
ಯುವತಿ ತಂದೆ-ತಾಯಿ ಸೇರಿ 12 ಜನರ ಮೇಲೆ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಐಪಿಸಿ 1860ರ ಅಡಿಯಲ್ಲಿ ಸೆಕ್ಷನ್ 143, 147, 148, 341, 342, 327, 324, 323, 307, 452, 427, 352(B) 149 ಮತ್ತು ಆಸ್ತಿ ಹಾನಿ ತಡೆಗಟ್ಟುವ ಕಾಯ್ದೆ 1981 ಅಡಿಯಲ್ಲಿ ಕೇಸ್ ದಾಖಲಾಗಿದೆ.