ವಿಜಯಪುರ: ಕಬ್ಬಿನ ಗದ್ದೆಗೆ ನೀರುಣಿಸಲು ಹೋಗಿದ್ದ ವ್ಯಕ್ತಿ ಮತ್ತು ಅವರ ಮಾವ ಕಾಲುವೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಅಶೋಕ ವೀರಬಸಪ್ಪ ಅಂಗಡಗೇರಿ ಮತ್ತು ಅಳಿಯ ಚಂದ್ರಶೇಖರ ಈರಪ್ಪ ಡೆಂಗಿ (40) ಎಂದು ಗುರುತಿಸಲಾಗಿದೆ.
ಡಿ.5ರ ಸೋಮವಾರ ಸಂಜೆ ಕಾಲುವೆಯಿಂದ ಜಮೀನುಗಳಿಗೆ ನೀರು ಬಿಡಲು ಮೊದಲು ಹೋಗಿದ್ದ ಅಶೋಕ ಎಂಬ ವ್ಯಕ್ತಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ನಂತರ, ತನ್ನ ಮಾವನ ರಕ್ಷಣೆಗೆ ಬಂದ ಅಳಿಯ ಚಂದ್ರಶೇಖರ್ ಕೂಡ ಕಾಲುವೆಗೆ ಇಳಿದು ಉಕ್ಕಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಹೋದರು.
ಡಿಸೆಂಬರ್ ೬ ರ ಮಂಗಳವಾರ ಅವರ ಮೃತದೇಹವನ್ನು ಹೊರತೆಗೆಯಲಾಯಿತು.