ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಯುಕೆಪಿ ವೃತ್ತದ ಬಳಿ ಅವಘಡ ಸಂಭವಿಸಿದೆ. ಸಿಮೆಂಟ್ ಲಾರಿ ಹರಿದು ಸ್ಥಳದಲ್ಲೇ ಒಬ್ಬ ಕುರಿಗಾರ ಹಾಗೂ 18 ಕುರಿಗಳು ಸಾವಿಗೀಡಾದ ಘಟನೆ ಗುರುವಾರ ಸಂಜೆ ನಡೆದಿದೆ.
ವೇಗವಾಗಿ ಬಂದ ಸಿಮೆಂಟ್ ಲಾರಿ ಕುರಿ ಹಿಂಡಿನ ಮೇಲೆ ಹರಿದ ಕಾರಣ ಹೋದ ರಭಸಕ್ಕೆ ಕೊಲ್ಹಾರದ ಕುರಿಗಾರ ರಾಮು ಯಲ್ಲವ್ವ ಗೊಲ್ಲರ (19) ತೆಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುರಂತ ಸಂಭವಿಸುತ್ತಲೇ ಲಾರಿ ಚಾಲಕ ಕೃಷ್ಣಾ ನದಿ ಸೇತುವೆ ಬಳಿಯ ಕೊರೆಮ್ಮ ದೇವಸ್ಥಾನದ ಬಳಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.
ಲಾರಿಯನ್ನು ವಶಕ್ಕೆ ಪಡೆದಿರುವ ಕೊಲ್ಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.