ವಿಜಯಪುರ: ಹಿಂದೂ ನಾಯಕರ ಬಗ್ಗೆ ಮಾತನಾಡಿದ್ರೆ ನಾಲಿಗೆ ಕಟ್ ಮಾಡಲು ಹಿಂದೆ ಸರಿಯಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ವಿವಾದಾತ್ಮಕ ಭಾಷಣ ಮಾಡಿದರು.
ವಿಜಯಪುರದಲ್ಲಿ ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಬುಧವಾರ ಹಮ್ಮಿಕೊಂಡಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಿಂದೂ ಶ್ರೀಗಳು, ಸಿಎಂ, ಶಾಸಕರ ಬಗ್ಗೆ ಮಾತನಾಡಿದ್ರೆ ಅಲ್ಲಿಯೇ ಬಂದು ನಾಲಿಗೆ ಕಟ್ ಮಾಡ್ತೀವಿ ಎಂದು ಭಾಷಣದ ವೇಳೆ ನಾಲಿಗೆ ಕಟ್ ಮಾಡುವ ಎಚ್ಚರಿಕೆ ನೀಡಿದರು. ಇನ್ನು ವೀರಾವೇಷದ ಭಾಷಣ ಮಾಡುವ ವೇಳೆ ನಾಲಿಗೆ ಕತ್ತರಿಸುವ ಬಗ್ಗೆ ಶಿವರುದ್ರ ಎಚ್ಚರಿಕೆ ನೀಡಿದರು.