ವಿಜಯಪುರ: ನಮ್ಮ ಪಕ್ಷದಲ್ಲಿ ಸಾಂದರ್ಭಿಕವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಅವರು ಇಂದು(ನ.21) ರಂದು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸವದತ್ತಿ ಶಾಸಕ ವೈದ್ಯ ಅವರು ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ನಮ್ಮ ಬೆಂಬಲಿಗರಿಗೆ ರಾಜಕೀಯದಲ್ಲಿ ನಮ್ಮ ನಾಯಕ, ಶಾಸಕ, ಸಂಸದ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂದೆಲ್ಲ ಅನೇಕ ಆಸೆ ಇರಿಸಿಕೊಂಡಿರುತ್ತಾರೆ.
ಅವರ ಭಾವನೆಗಳನ್ನು ತಡೆಯಲು ಆಗದು. ಆದರೆ ರಾಜಕೀಯದಲ್ಲಿ ವಾಸ್ತವಿಕ ವ್ಯವಸ್ಥೆಯೇ ಬೇರೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು.
ಇಂಥ ಗಂಭೀರ, ಜ್ವಲಂತ ಸಮಸ್ಯೆ ಕಣ್ಮುಂದೆ ಇರುವಾಗ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಯೋಚನೆ ಮಾಡುವ ಸ್ಥಿತಿ ಇಲ್ಲವೇ ಇಲ್ಲ ಎಂದು ಹೇಳಿದರು.