News Karnataka Kannada
Friday, May 03 2024
ವಿಜಯಪುರ

ನೇಹಾಳನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಜಂಗಮ ಹಿಂದೂ ಸಮಾಜದಿಂದ ಪ್ರತಿಭಟನೆ

ಎಂ.ಸಿ.ಎ. ವಿದ್ಯಾರ್ಥಿನಿಯಾದ ಕುಮಾರಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡು ಹಗಲೇ ಕಾಲೇಜಿನ ಆವರಣದಲ್ಲಿ 9 ಸಲ ಚಾಕುವಿನಿಂದ ಹಿರಿದು ಕ್ರೂರ ಪತ್ತೆ ಮಾಡಲಾಗಿದ್ದು ಪ್ರಮುಖ ಆರೋಪಿ ಫಯಾಜನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
Photo Credit : NewsKarnataka

ವಿಜಯಪುರ: ಎಂ.ಸಿ.ಎ. ವಿದ್ಯಾರ್ಥಿನಿಯಾದ ಕುಮಾರಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡು ಹಗಲೇ ಕಾಲೇಜಿನ ಆವರಣದಲ್ಲಿ 9 ಸಲ ಚಾಕುವಿನಿಂದ ಹಿರಿದು ಕ್ರೂರ ಪತ್ತೆ ಮಾಡಲಾಗಿದ್ದು ಪ್ರಮುಖ ಆರೋಪಿ ಫಯಾಜನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಇವನ ಜೊತೆ ಇತರೆ ನಾಲ್ಕು ಜನ ಸಹಪಾಠಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಆ ಇತರೆ ನಾಲ್ಕು ಜನ ಆರೋಪಿಗಳನ್ನು ಸಹ ಕೂಡಲೇ ಬಂಧಿಸಬೇಕು. ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯಸಮ್ಮತ ವರದಿ ನೀಡಬೇಕು.

ಅದರಂತೆ ಪ್ರಾಸಿಕ್ಯೂಶನ್ ಕ್ರಮ ವಹಿಸಬೇಕು ಎಂದು ಜಂಗಮ ಹಿಂದೂ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತನಿಖಾಧಿಕಾರಿಗಳಾದ ಪೊಲೀಸರು ಶೀಘ್ರ ತನಿಖೆ ಮುಗಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

ಸಂಬಂಧಪಟ್ಟ ಮಾನ್ಯ ಘನ ನ್ಯಾಯಾಲಯವು ಒಂದು ತಿಂಗಳ ಒಳಗೆ ವಿಚಾರಣೆ ಮುಗಿಸಿ ಸದ್ಯದ ಕಾನೂನಿನಲ್ಲಿ ಅವಕಾಶವಿರುವಂತೆ ಗರಿಷ್ಠಮಟ್ಟದ ಶಿಕ್ಷೆಯನ್ನು ವಿಧಿಸಲು ಕೋರಿಕೆ.

ಕುಮಾರಿ ನೇಹಾ ಹಿರೇಮಠ ಅವರ ಮೇಲೆ ಆದಂತಹ ಕೃತ್ಯಗಳು ಇನ್ನೆಂದು ಮುಂದೆ ಮರುಕಳಿಸದಂತೆ ಇಂತಹ ಹೀನ ಮತ್ತು ಘೋರ ಅಪರಾಧಗಳಿಗೆ ಪೋಕೋ ಕಾಯ್ದೆಯಂತೆ ವಿರಳ ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸುವಂತೆ ಅವಕಾಶ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಕೂಡಲೇ ಕಾನೂನು ರೂಪಿಸಿ ಸುಪ್ರಿವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು