ವಿಜಯಪುರ: ಎಂ.ಸಿ.ಎ. ವಿದ್ಯಾರ್ಥಿನಿಯಾದ ಕುಮಾರಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡು ಹಗಲೇ ಕಾಲೇಜಿನ ಆವರಣದಲ್ಲಿ 9 ಸಲ ಚಾಕುವಿನಿಂದ ಹಿರಿದು ಕ್ರೂರ ಪತ್ತೆ ಮಾಡಲಾಗಿದ್ದು ಪ್ರಮುಖ ಆರೋಪಿ ಫಯಾಜನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಇವನ ಜೊತೆ ಇತರೆ ನಾಲ್ಕು ಜನ ಸಹಪಾಠಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಆ ಇತರೆ ನಾಲ್ಕು ಜನ ಆರೋಪಿಗಳನ್ನು ಸಹ ಕೂಡಲೇ ಬಂಧಿಸಬೇಕು. ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯಸಮ್ಮತ ವರದಿ ನೀಡಬೇಕು.
ಅದರಂತೆ ಪ್ರಾಸಿಕ್ಯೂಶನ್ ಕ್ರಮ ವಹಿಸಬೇಕು ಎಂದು ಜಂಗಮ ಹಿಂದೂ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತನಿಖಾಧಿಕಾರಿಗಳಾದ ಪೊಲೀಸರು ಶೀಘ್ರ ತನಿಖೆ ಮುಗಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಸಂಬಂಧಪಟ್ಟ ಮಾನ್ಯ ಘನ ನ್ಯಾಯಾಲಯವು ಒಂದು ತಿಂಗಳ ಒಳಗೆ ವಿಚಾರಣೆ ಮುಗಿಸಿ ಸದ್ಯದ ಕಾನೂನಿನಲ್ಲಿ ಅವಕಾಶವಿರುವಂತೆ ಗರಿಷ್ಠಮಟ್ಟದ ಶಿಕ್ಷೆಯನ್ನು ವಿಧಿಸಲು ಕೋರಿಕೆ.
ಕುಮಾರಿ ನೇಹಾ ಹಿರೇಮಠ ಅವರ ಮೇಲೆ ಆದಂತಹ ಕೃತ್ಯಗಳು ಇನ್ನೆಂದು ಮುಂದೆ ಮರುಕಳಿಸದಂತೆ ಇಂತಹ ಹೀನ ಮತ್ತು ಘೋರ ಅಪರಾಧಗಳಿಗೆ ಪೋಕೋ ಕಾಯ್ದೆಯಂತೆ ವಿರಳ ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸುವಂತೆ ಅವಕಾಶ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಕೂಡಲೇ ಕಾನೂನು ರೂಪಿಸಿ ಸುಪ್ರಿವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ