ವಿಜಯಪುರ: ಕಾಂಗ್ರೆಸ್ ಭ್ರಷ್ಟಾಚಾರದ ಮಹಾನ್ ಪೋಷಕ, ಕಾಂಗ್ರೆಸ್ ಸರಕಾರ ಎಂದಿಗೂ ಜನರ ಕಲ್ಯಾಣದ ಬಗ್ಗೆ ಯೋಚಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೈನಿಕ್ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಬೃಹತ್ ಸಾರ್ವಜನಿಕ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಭಾರತದ ಜನರಿಗೆ ನೀಡಿದ ಏಕೈಕ ಕೊಡುಗೆಯೆಂದರೆ ಅವರ ಭ್ರಷ್ಟಾಚಾರದ ಪರಂಪರೆ. ಕೇಂದ್ರವು ಒಂದು ರೂಪಾಯಿ ಕೊಟ್ಟಾಗ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ಅವರದೇ ಪ್ರಧಾನಿ (ರಾಜೀವ್ ಗಾಂಧಿ) ಒಪ್ಪಿಕೊಂಡಿದ್ದರು. ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರದೇ ಪ್ರಧಾನಿ ಒಪ್ಪಿಕೊಂಡಾಗ, ಕಾಂಗ್ರೆಸ್ ಯಾವ ರೀತಿಯ ಸರ್ಕಾರವನ್ನು ನೀಡಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು” ಎಂದು ಅವರು ಹೇಳಿದರು.
ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ್, ಪಕ್ಷದ ಅಭ್ಯರ್ಥಿಗಳು, ಮುಖಂಡರು ಉಪಸ್ಥಿತರಿದ್ದರು.